ಕೆಜಿಎಫ್ 2ನಲ್ಲಿ ಶಿವಗಾಮಿ, ಮುನ್ನಾಭಾಯಿ

Update: 2019-02-17 10:20 GMT

‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಮೂಲಕ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಈ ಚಿತ್ರ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು ಹಾಗೂ ಎಲ್ಲ ಭಾಷೆಗಳಲ್ಲಿ ಕೂಡ ಯಶಸ್ವಿಯಾಗಿತ್ತು. ಈಗ ಎಲ್ಲರ ಕಣ್ಣು ‘ಕೆಜಿಎಫ್ ಚಾಪ್ಟರ್ 1’ನ ಸೀಕ್ವಲ್ ‘ಕೆಜಿಎಫ್-ಚಾಪ್ಟರ್ 2’ನತ್ತ ನೆಟ್ಟಿದೆ. ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ನಡುವೆ ಚಿತ್ರದಲ್ಲಿ ಶಿವಗಾಮಿ ಖ್ಯಾತಿಯ ರಮ್ಯಾ ಕೃಷ್ಣ ಹಾಗೂ ಮುನ್ನಾಭಾಯಿ ಖ್ಯಾತಿಯ ಸಂಜಯ್ ದತ್ ನಟಿಸಲಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ‘ಕೆಜಿಎಫ್-ಚಾಪ್ಟರ್ 2’ನ ನಿರ್ದೇಶಕರು ರಮ್ಯಾ ಕೃಷ್ಣ ಅವರನ್ನು ಸಂಪರ್ಕಿಸಿದ್ದಾರೆ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ಅವರಲ್ಲಿ ಕೇಳಿಕೊಂಡಿದ್ದಾರೆ. ‘ಕೆಜಿಎಫ್ 2’ನಲ್ಲಿ ರಮ್ಯಾ ಕೃಷ್ಣ ಭಾರತದ ರಾಷ್ಟ್ರಪತಿ ಅವರ ಪಾತ್ರ ನಿರ್ವಹಿಸಲಿದ್ದಾರೆೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ವಿಭಿನ್ನ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಸ್ಯಾಂಡಲ್‌ವುಡ್ ಮಾಧ್ಯಮಗಳು ವರದಿ ಮಾಡಿವೆ. ರವಿಶಂಕರ್ ಅವರು ‘ಕೆಜಿಎಫ್ ಚಾಪ್ಟರ್ 1’ರಲ್ಲಿ ನಿರ್ವಹಿಸಿದ ಅಥಿರಾ ಪಾತ್ರವನ್ನು ‘ಕೆಜಿಎಫ್-ಚಾಪ್ಟರ್ 2’ನಲ್ಲೂ ನಿರ್ವಹಿಸಲಿದ್ದಾರೆ. ಸಂಪತ್ ಕುಮಾರ್, ಮಧು ಗುರುಸ್ವಾಮಿ ಕೂಡ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಕೃಷ್ಣ ಹಾಗೂ ಸಂಜಯ್ ದತ್ ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಈಗ ನಡೆಯುತ್ತಿರುವ ಬಿಸಿಬಿಸಿ ಚರ್ಚೆ. ‘ಕೆಜಿಎಫ್-ಚಾಪ್ಟರ್ 1’ರಂತೆ ‘ಕೆಜಿಎಫ್-ಚಾಪ್ಟರ್ 2’ ಕೂಡ ಇತಿಹಾಸ ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News