ವಿಮಾನ ಹಾರಾಟದ ಪ್ರತಿ ಘೋಷಣೆಯ ಬಳಿಕ ‘ಜೈ ಹಿಂದ್’ ಹೇಳಿ: ಸಿಬ್ಬಂದಿಗೆ ಏರ್ ಇಂಡಿಯ ನಿರ್ದೇಶನ

Update: 2019-03-04 18:05 GMT

ಹೊಸದಿಲ್ಲಿ, ಮಾ. 4: ವಿಮಾನ ಹಾರಾಟದ ಪ್ರತಿ ಘೋಷಣೆಯ ಬಳಿಕ ಏರ್ ಇಂಡಿಯಾದ ಸಿಬ್ಬಂದಿ ‘ಜೈ ಹಿಂದ್’ಎಂದು ಹೇಳಬೇಕು ಎಂದು ವಿಮಾನ ಯಾನ ಸಂಸ್ಥೆಯ ಅಧಿಕೃತ ಸಲಹೆಗಾರ ಸೋಮವಾರ ಹೇಳಿದ್ದಾರೆ.

ದೇಶದ ಮನಸ್ಥಿತಿಯನ್ನು ಸರಿಯಾಗಿರಿಸಲು ಸಿಬ್ಬಂದಿಗೆ ಇದನ್ನು ನೆನಪು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಕೂಡಲೇ ಅನುಷ್ಠಾನಕ್ಕೆ ಬರುವಂತೆ ಪ್ರತಿ ಘೋಷಣೆಯ ಅಂತ್ಯದಲ್ಲಿ ಸಿಬ್ಬಂದಿ ಜೈ ಹಿಂದ್ ಎಂದು ಹೇಳುವ ಅಗತ್ಯತೆ ಇದೆ.’’ ಎಂದು ವಿಮಾ ಸಂಸ್ಥೆಯ ಕಾರ್ಯಾಚರಣೆಯ ನಿರ್ದೇಶಕ ಅಮಿತಾಭ್ ಸಿಂಗ್ ನೀಡಿದ ಸಲಹೆಯಲ್ಲಿ ಹೇಳಲಾಗಿದೆ.

2016 ಮೇಯಲ್ಲಿ ಪೈಲೆಟ್‌ಗಳಿಗೆ ಇದೇ ರೀತಿಯ ನಿರ್ದೇಶನವನ್ನು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೋಹಾನಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News