ಫೇಶಿಯಲ್ ಮಾಡುವ, ಕೂದಲಿಗೆ ಬಣ್ಣ ಹಚ್ಚುವ ಮಾಯಾವತಿ ಮೋದಿಯನ್ನು ಪ್ರಶ್ನಿಸಬಾರದು ಎಂದ ಬಿಜೆಪಿ ಶಾಸಕ

Update: 2019-03-19 11:20 GMT

ಲಕ್ನೋ, ಮಾ.19: ಪ್ರತಿ ದಿನ ಫೇಶಿಯಲ್ ಮಾಡುವವರು ಇನ್ನೊಬ್ಬರ ಇಚ್ಛೆಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯನ್ನುದ್ದೇಶಿಸಿ ಹೇಳಿದ್ದಾರೆ.

ರಾಜ ವೈಭೋಗದಲ್ಲಿ ಬದುಕಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಚಾಯ್ ವಾಲ ಎಂದು ಘೋಷಿಸಿದ್ದರೆ ಇದೀಗ  ತಮ್ಮನ್ನು ಚೌಕೀದಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‍ಪಿ ನಾಯಕಿ ಪ್ರಧಾನಿ ನರೇಂದ್ರ ಮೋದಿಯ ಹೆಸರೆತ್ತದೆಯೇ ಟೀಕಿಸಿದ್ದರಿಂದ ಅಸಮಾಧಾನಗೊಂಡು ಸಿಂಗ್ ಮೇಲಿನಂತೆ ಪ್ರತಿಕ್ರಿಯಿಸಿ ವಿವಾದಕ್ಕೀಡಾಗಿದ್ದಾರೆ.

“ಮಾಯಾವತಿ ಪ್ರತಿ ದಿನ ಫೇಶಿಯಲ್ ಮಾಡಿಸುತ್ತಿದ್ದಾರೆ ಇನೊಬ್ಬರ ಜೀವನ ಶೈಲಿಯ ಬಗ್ಗೆ ಆಕೆ ಹೇಗೆ ಪ್ರಶ್ನೆಗಳನ್ನು ಕೇಳಬಹುದು?, ಉತ್ತಮ ಬಟ್ಟೆಗಳನ್ನು ಧರಿಸುವುದು ವಿಲಾಸಿ ಜೀವನವಲ್ಲ. ವಯಸ್ಸು 60 ಆದರೂ ಯುವತಿಯರಂತೆ ಕಾಣಬೇಕೆಂದು ನಿಮ್ಮ ಕೂದಲಿಗೆ ಬಣ್ಣ ಹಚ್ಚುವುದು ವಿಲಾಸಿ ಜೀವನ'' ಎಂದು ಸಿಂಗ್ ಹೇಳಿದ್ದಾರೆ. ಸಚಿವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News