ಎಐಎಡಿಎಂಕೆ ಶಾಸಕ ಕನಗರಾಜ್ ಹೃದಯಾಘಾತಕ್ಕೆ ಬಲಿ

Update: 2019-03-21 16:04 GMT

ಚೆನ್ನೈ,ಮಾ.21: ತಮಿಳುನಾಡಿನ ಸೂಲುರ್ ವಿಧಾನಸಭಾ ಕ್ಷೇತ್ರದ ಶಾಸಕ ಎಐಎಡಿಎಂಕೆಯ ಆರ್.ಕನಗರಾಜ್ ಗುರುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

64ರ ಹರೆಯದ ಕನಗರಾಜ್ ಪತ್ನಿ, ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ. ಕನಗರಾಜ್ ಸಾವಿನಿಂದ ತಮಿಳುನಾಡಿನಲ್ಲಿ ಖಾಲಿಯಿರುವ ವಿಧಾನಸಭಾ ಸ್ಥಾನಗಳ ಸಂಖ್ಯೆ 22ಕ್ಕೆ ಏರಿದೆ ಮತ್ತು ಎಐಎಡಿಎಂಕೆ ಶಾಸಕರ ಸಂಖ್ಯೆ ಸ್ಪೀಕರ್ ಸೇರಿ 114ಕ್ಕೆ ಇಳಿದಿದೆ. ಚುನಾವಣಾ ಆಯೋಗ ಇಲ್ಲಿನ 18 ವಿಧಾನಸಭಾ ಸ್ಥಾನಗಳಿಗೆ ಎಪ್ರಿಲ್ 18ರಂದು ಲೋಕಸಭಾ ಚುನಾವಣೆಯ ಸಮಯದಲ್ಲೇ ಉಪಚುನಾವಣೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News