ಗಾಯಗೊಂಡ ಪತ್ರಕರ್ತನನ್ನು ಆಸ್ಪತ್ರೆಗೆ ದಾಖಲಿಸಿದ ರಾಹುಲ್: ‘ಇನ್ನೊಂದು ಬಾರಿ ಪ್ಲೀಸ್’ ಎಂದ ಗಾಯಾಳು!

Update: 2019-03-27 18:20 GMT

ಹೊಸದಿಲ್ಲಿ,ಮಾ.27: ದಿಲ್ಲಿಯಲ್ಲಿ ಅಪಘಾತಕ್ಕೀಡಾದ ಪತ್ರಕರ್ತನ ನೆರವಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಧಾವಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಗಾಯಾಳು ಪತ್ರಕರ್ತನಿಗೆ ರಾಹುಲ್ ಗಾಂಧಿ ಶುಶ್ರೂಷೆ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದ್ದು, ಈ ದೃಶ್ಯದಲ್ಲಿ ಪತ್ರಕರ್ತ ರಾಹುಲ್ ಬಳಿ, “ಸರ್ ಇನ್ನೊಂದು ಬಾರಿ ಪ್ಲೀಸ್” ಎಂದು ಹಣೆಯನ್ನು ರಾಹುಲ್ ಕೈಯಲ್ಲಿ ಒರೆಸಿಕೊಳ್ಳುವುದು ದಾಖಲಾಗಿದೆ.

ರಾಜಸ್ಥಾನದ ಮೂಲದ ದಿನಪತ್ರಿಕೆಯ ಮಾಲಕ ರಾಜೇಂದ್ರ ವ್ಯಾಸ್ ಕೇಂದ್ರ ದಿಲ್ಲಿಯ ಹುಮಾಯುನ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಅದೇ ರಸ್ತೆಯಾಗಿ ಸಾಗುತ್ತಿದ್ದ ರಾಹುಲ್ ಗಾಂಧಿ ತಮ್ಮ ವಾಹನವನ್ನು ನಿಲ್ಲಿಸಿ ಪತ್ರಕರ್ತನನ್ನು ತಮ್ಮ ಕಾರಿನಲ್ಲಿ ಏಮ್ಸ್‌ಗೆ ದಾಖಲಿಸಿದ್ದರು.

ಪ್ರಯಾಣದ ವೇಳೆ ರಾಹುಲ್ ಗಾಂಧಿಯ ಸಿಬ್ಬಂದಿ ಚಿತ್ರೀಕರಿಸಿರುವ ವಿಡಿಯೊದಲ್ಲಿ ರಾಹುಲ್ ಗಾಯಾಳು ಪತ್ರಕರ್ತನ ಹಣೆಯನ್ನು ಬಟ್ಟೆಯಿಂದ ಒರೆಸುತ್ತಿರುವುದನ್ನು ತೋರಿಸಲಾಗಿದೆ. ಸ್ವಲ್ಪ ಹೊತ್ತಿನ ನಂತರ ಪತ್ರಕರ್ತ ರಾಹುಲ್ ಬಳಿ ವಾಪಸ್ ತನ್ನ ಹಣೆಯನ್ನು ಒರೆಸಲು ಒತ್ತಾಯಿಸುತ್ತಾ, “ಸರ್ ದಯಮಾಡಿ ಇನ್ನೊಮ್ಮೆ ನನ್ನ ಹಣೆಯನ್ನು ಒರೆಸಿ. ಈ ವಿಡಿಯೊವನ್ನು ನಾನು ನನ್ನ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ” ಎಂದು ಹೇಳುತ್ತಿರುವುದು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News