ಒಡಿಶಾ ವಿಧಾನಸಭೆ ಚುನಾವಣೆ: ಮತ್ತೆ 9 ಅಭ್ಯರ್ಥಿಗಳನ್ನು ಪ್ರಕಟಿಸಿದ ಕಾಂಗ್ರೆಸ್

Update: 2019-04-07 15:40 GMT

ಭುವನೇಶ್ವರ, ಎ.7: ಒಡಿಶಾದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ 9 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ.

ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಭಂಡಾರಿಪೊಖಾರಿ ಹಾಗೂ ಘಾಸಿಪುರ - ಈ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.

ನಳಿನಿಕಾಂತ ಮೊಹಾಂತಿ ಭದ್ರಕ್‌ನಿಂದ, ಸೀತಾಕಾಂತ ಮೊಹಾಪಾತ್ರ ಬರ್ಚಾನದಿಂದ, ರಬೀಂದ್ರನಾಥ್ ಕಾರ್ ಸಾಲೇಪುರ್‌ನಿಂದ, ಬಿಭ್ರಂಶು ಶೇಖರ್ ಲೆಂಕಾ ಮಹಾಕಾಲಪಾದ ಕ್ಷೇತ್ರದಿಂದ, ಡಾ. ಲಲತೇಂದು ಮೊಹಾಪಾತ್ರ ಬಾಲಿಕುಡ-ಎರಸ್ಮದಿಂದ, ಸತ್ಯಬ್ರತ ಪಾತ್ರ ನಿಮಾಪಾರದಿಂದ ಕಣಕ್ಕಿಳಿಯಲಿದ್ದಾರೆ. ತಿರ್ತೋಲ್ ಕ್ಷೇತ್ರದಿಂದ ಬಿಬು ಪ್ರಸಾದ್ ತರಾಯ್ ಬದಲು ದೇಬಿಪ್ರಸಾದ್ ಮಲಿಕ್, ಧರ್ಮಸಾಲದಿಂದ ಕಿಸನ್ ಪಾಂಡ ಬದಲು ಸ್ಮತಿರೇಖಾ ಪಾಹಿ ಕಣಕ್ಕಿಳಿದಿದ್ದಾರೆ.

ಈ ಮಧ್ಯೆ, ಬಿಜು ಜನತಾದಳದಿಂದ ಬರಿಪಾದ ಕ್ಷೇತ್ರದಿಂದ ಸರೋಜಿನಿ ಹೇಂಬ್ರಮ್ ಕಣಕ್ಕಿಳಿದಿದ್ದಾರೆ. ಸರೋಜಿನಿ ಹಾಲಿ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News