ಬೀಫ್ ಇದ್ದ ಆರೋಪ : ವ್ಯಕ್ತಿಗೆ ಥಳಿಸಿ ಹಂದಿ ಮಾಂಸ ತಿನ್ನಿಸಿದ ಗುಂಪು

Update: 2019-04-08 16:05 GMT

ಗುವಾಹಟಿ , ಎ. 8 : ಇಲ್ಲಿನ ಬಿಸ್ವನಾಥ್ ಚಾರಿಯಲಿ ಎಂಬಲ್ಲಿ ರವಿವಾರ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಸೇರಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಶೌಕತ್ ಅಲಿ ಎಂಬವರ  ಕೈಯಲ್ಲಿ ಬೀಫ್ ಇತ್ತೆಂದು ಆರೋಪಿಸಿ ಜನರು ಒಂದುಗೂಡಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಅವರನ್ನು ಬಲವಂತವಾಗಿ ಹಂದಿ ಮಾಂಸವನ್ನು ತಿನ್ನಿಸಿದ್ದಾರೆ ಎಂದು ಗುವಾಹಟಿ ಪ್ಲಸ್ (guwahatiplus.com) ವರದಿ ಮಾಡಿದೆ.

ಇಲ್ಲಿನ ಲೈನ್ ಹೋಟೆಲ್ ಎಂಬ ಹೋಟೆಲ್ ನಡೆಸುತ್ತಿರುವ ಶೌಕತ್ ಅಲಿ ಅವರನ್ನು ಸುತ್ತುವರಿದ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಅವರಿಗೆ ಬಲವಂತವಾಗಿ ಹಂದಿ ಮಾಂಸವನ್ನು ತಿನ್ನುವಂತೆ ಮಾಡಿದೆ ಎಂದು ವರದಿಯಾಗಿದೆ.

ಅಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಸುತ್ತಮುತ್ತ ಉದ್ವಿಗ್ನವಾಗಿ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಳಿಕ ಪೊಲೀಸರು ಅಲ್ಲಿಗೆ ಧಾವಿಸಿದ್ದಾರೆ ಎಂದು ಗುವಾಹಟಿ ಪ್ಲಸ್ ವರದಿ ಮಾಡಿದೆ. 

ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಖಚಿತ ಪಡಿಸಿದ್ದು ಈವರೆಗೆ ಪ್ರಕರಣದಲ್ಲಿ ಎಫ್ ಐ ಆರ್ ಆಗಿಲ್ಲ ಎಂದು ಹೇಳಿದ್ದಾಗಿ ಗುವಾಹಟಿ ಪ್ಲಸ್ ವರದಿ ಮಾಡಿದೆ. 

ಘಟನೆ ಬಗ್ಗೆ ವಾರ್ತಾಭಾರತಿಗೆ ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ. 

ವಿಡಿಯೋ ಕೃಪೆ :  www.guwahatiplus.com 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News