ಹಲ್ಲೆಯಿಂದ ಮೋದಿಯ ವೃದ್ಧ ಬೆಂಬಲಿಗನ ಸಾವು

Update: 2019-04-14 18:50 GMT

ತಾಂಜಾವೂರು,ಎ.14: ಡಿಎಂಕೆ-ಕಾಂಗ್ರೆಸ್ ಬೆಂಬಲಿಗನಿಂದ ಹಲ್ಲೆಗೊಳಗಾದ ಮೋದಿಯವರ 75ರ ಹರೆಯದ ಬೆಂಬಲಿಗ ಸಾವಿಗೀಡಾದ ಘಟನೆ ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶನಿವಾರ ಒರತನಾಡುವಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಮತಯಾಚನೆ ಮಾಡುತ್ತಿದ್ದ ವೃದ್ಧ ಗೋವಿಂದರಾಜನ್ ಜೊತೆ ಗೋಪಿನಾಥ್ ಎಂಬಾತ ವಾಗ್ವಾದಕ್ಕಿಳಿದಿದ್ದ. ಮಾತಿನ ಚಕಮಕಿ ತಾರಕಕ್ಕೇರಿ ಗೋಪಿನಾಥ್ ವೃದ್ಧನಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ನೆಲಕ್ಕುರುಳಿದ ವೃದ್ಧ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಆರೋಪಿ ಗೋಪಿನಾಥ್‌ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೃತ ಗೋವಿಂದರಾಜನ್ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ ರಾಮಚಂದ್ರನ್ ಅವರ ಅಭಿಮಾನಿಯಾಗಿದ್ದರೆ ಆರೋಪಿ ಗೋಪಿನಾಥ್ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿಗನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News