ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ

Update: 2019-04-16 05:44 GMT

ತಿರುವನಂತಪುರ, ಎ.16: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾಲ ಕೇರಳದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ಸೋಮವಾರ ರಾತ್ರಿ ತಿರುವನಂತಪುರ ತಲುಪಲಿದ್ದಾರೆ.

ಕೇರಳದಲ್ಲಿ ಎ.23ರಂದು ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿ ವಯನಾಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿರುವ ರಾಹುಲ್ ಗಾಂಧಿ ಅವರು ಪಟ್ಟಣಪುರಂ ಮತ್ತು ಪಟ್ಟಣಂತಿಟ್ಟದಲ್ಲಿ ಇಂದು ಸಾರ್ವಜನಿಕ  ರ‍್ಯಾಲಿಯನ್ನುದ್ದೇಶಿಸಿ  ಮಾತನಾಡಲಿದ್ದಾರೆ.

ಇತ್ತೀಚೆಗೆ ನಿಧನರಾಧ ಕೇರಳ ಕಾಂಗ್ರೆಸ್ (ಎಂ) ಮುಖ್ಯಸ್ಥ ಕೆ.ಎಂ ಮಾಣಿ ಅವರ ಮನೆಗೆ ಇಂದು ಮಧ್ಯಾಹ್ನ 1 ಗಂಟೆಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.

ಎ.17ರಂದು ರಾತ್ರಿ 7:30ಕ್ಕೆ ಕಣ್ಣೂರಿನ ಸಾಧು ಆಡಿಟೋರಿಯಮ್ ನಲ್ಲಿ  ನಡೆಯಲಿರುವ ಸಭೆಯಲ್ಲಿ ಕಣ್ಣೂರು , ಕೊಝಿಕ್ಕೋಡ್ ಮತ್ತು ಕಾಸರಗೋಡಿನ ಯುಡಿಎಫ್ ಧುರೀಣರ ನ್ನು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ.

ವಯನಾಡ್ ನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ವಯನಾಡಿನಲ್ಲಿ ಎ.17ರಂದು ವಿವಿಧಡೆ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News