ಚುನಾವಣೆಯಲ್ಲಿ ಜಯ ಗಳಿಸುವುದನ್ನು ಬಿಜೆಪಿಗೆ ತಡೆಯಲು ಅಸಾಧ್ಯ: ಕನ್ನಿಮೋಳ್

Update: 2019-04-17 15:37 GMT

ತೂತುಕುಡಿ, ಎ. 17: ತನ್ನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದರೂ ವಿಚಲಿತರಾಗದ ಡಿಎಂಕೆ ನಾಯಕಿ ಕನ್ನಿಮೋಳ್, ಲೋಕಸಭಾ ಚುನಾವಣೆಯಲ್ಲಿ ತಾನು ಜಯ ಗಳಿಸುವುದನ್ನು ಬಿಜೆಪಿಗೆ ತಪ್ಪಿಸಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಆದಾಯ ತೆರಿಗೆ ದಾಳಿಯನ್ನು ಅವರು ಪ್ರಜಾಪ್ರಭುತ್ವ ವಿರೋಧಿ, ಉದ್ದೇಶಪೂರ್ವಕವಾಗಿ ಯೋಜಿಸಿದ ದಾಳಿ ಎಂದು ವ್ಯಾಖ್ಯಾನಿಸಿದ್ದಾರೆ.

‘‘ಆದಾಯ ತೆರಿಗೆ ಇಲಾಖೆ ದಾಳಿ ಮೂಲಕ ನಾನು ಜಯ ಗಳಿಸುವುದನ್ನು ಬಿಜೆಪಿಗೆ ತಡೆಯಲು ಸಾಧ್ಯವಿಲ್ಲ. ಇದು ಅಸಾಂವಿಧಾನಿಕ, ಉದ್ದೇಶಪೂರ್ವಕ ಯೋಜಿಸಿದ ದಾಳಿ. ಆದಾಯ ತೆರಿಗೆ ಇಲಾಖೆ ಯಾವುದೇ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ’’ ಎಂದು ದಾಳಿ ಪೂರ್ಣಗೊಂಡ ಬಳಿಕ ಕನ್ನಿಮೋಳ್ ತಿಳಿಸಿದ್ದಾರೆ.

ಸ್ಥಳೀಯಾಡಳಿತ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಕನ್ನಿಮೋಳಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ಸಂಜೆ ದಾಳಿ ನಡೆಸಿತ್ತು. ದಾಳಿ ವೇಳೆ ಕನ್ನಿಮೋಳ್ ಇದ್ದರು ಹಾಗೂ ಐಟಿ ಅಧಿಕಾರಿಗಳಿಗೆ ಸಹಕಾರ ನೀಡಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News