ನನ್ನನ್ನು ನಿಮ್ಮ ಪುತ್ರ, ಉತ್ತಮ ಗೆಳೆಯನೆಂದು ಪರಿಗಣಿಸಿ: ಕೇರಳದಲ್ಲಿ ರಾಹುಲ್ ಗಾಂಧಿ

Update: 2019-04-17 15:42 GMT

ವಯನಾಡ್, ಎ. 17: ನನ್ನನ್ನು ನಿಮ್ಮ ಪುತ್ರ ಹಾಗೂ ಆತ್ಮೀಯ ಗೆಳೆಯನೆಂದು ಪರಿಗಣಿಸಿ ಎಂದು ಕೇರಳದ ವಯನಾಡ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶದ ಇತರ ಭಾಗಗಳಿಗಿಂತ ದಕ್ಷಿಣ ಅತಿ ಮುಖ್ಯವಾದುದು ಎಂಬ ಸಂದೇಶ ರವಾನಿಸಲು ನಾನು ಬಯಸುತ್ತಿದ್ದೇನೆ. ನಿಮ್ಮ ಧ್ವನಿ ಇತರ ಧ್ವನಿಯಷ್ಟೇ ಸುದೃಢವಾಗಿದೆ ಎಂದು ಅವರು ಹೇಳಿದರು.

ಕೇರಳದ ವೈವಿಧ್ಯತೆ ಪ್ರಶಂಸಿಸಿದ ರಾಹುಲ್ ಗಾಂಧಿ, ದೇಶದಲ್ಲಿ ಏಕರೂಪತೆ ತರಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದರು.

ತನ್ನ ಕುಟುಂಬದ ನಿಧನರಾದ ಸದಸ್ಯರಿಗೆ ಹಾಗೂ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ತಿರುನೆಲ್ಲಿ ದೇವಾಲಯದಲ್ಲಿ ಬುಧವಾರ ಕೆಲವು ವಿಧಿವಿಧಾನಗಳನ್ನು ನೆರವೇರಿಸಿ ಅವರು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗಿದ್ದರು.

 ‘‘ಇಲ್ಲಿಗೆ ಬರಬೇಕೆಂದು ರಾಹುಲ್ ಗಾಂಧಿ ಅವರು ಕಳೆದ ಭಾರಿಯೇ ಬಯಸಿದ್ದರು. ಆದರೆ, ಭದ್ರತಾ ನಿರ್ಬಂಧದಿಂದ ಬರಲು ಸಾಧ್ಯವಾಗಲಿಲ್ಲ. ಇಲ್ಲಿನ ಪಾಪನಾಶಿನಿ ನದಿಯಲ್ಲೇ ರಾಜೀವ್ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಲಾಗಿತ್ತು’’ ಎಂದು ವೇಣುಗೋಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News