ಮಂಡ್ಯದಲ್ಲಿ ನಿಖಿಲ್ –ಸುಮಲತಾ ಬೆಂಬಲಿಗರ ನಡುವೆ ಗಲಾಟೆ
Update: 2019-04-18 08:51 GMT
ಮಂಡ್ಯ, ಎ.18: ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಬೆಂಬಲಿಗರ ನಡುವೆ ಗುರುವಾರ ಮಧ್ಯಾಹ್ನ ಮಾತಿನ ಚಕಮಕಿ ಸಂಭವಿಸಿದೆ.
ಸುಮಲತಾ ಮತ್ತು ನಿಖಿಲ್ ಮುಖಾಮುಖಿಯಾದಾಗ ಬೆಂಬಲಿಗರ ನಡುವೆ ಹೊಡೆದಾಟ ಸಂಭವಿಸಿತು. ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಸುಮಲತಾ ಅಂಬರೀಷ್ ಆಗಮಿಸಿದ್ದರು. ಇದೇ ವೇಳೆ ನಿಖಿಲ್ ಅಲ್ಲಿಗೆ ಭೇಟಿ ನೀಡಿದರು.
ನಿಖಿಲ್ ಪರ ಅವರ ಬೆಂಬಲಿಗರು ಜೈಕಾರ ಕೂಗಿದರು. ಆಗ ಸುಮಲತಾ ಬೆಂಬಲಿಗರು ತಮ್ಮ ತಮ್ಮ ನಾಯಕಿಯ ಪರ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಬೆಂಬಲಿಗರ ನಡುವೆ ಪರಸ್ಪರರ ಚಕಮಕಿ ನಡೆದು ಹೊಡೆದಾಟ ಸಂಭವಿಸುವ ಹಂತಕ್ಕೆ ಬಂತು. ಆಗ ಪೊಲೀಸರು ಲಘ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ತಿಳಿದು ಬಂದಿದೆ.