ಬಾಲಕೋಟ್ ದಾಳಿಯಲ್ಲಿ ಪಾಕ್ ಸೈನಿಕರಾಗಲೀ, ಪ್ರಜೆಗಳಾಗಲೀ ಸತ್ತಿಲ್ಲ: ಸುಷ್ಮಾ ಸ್ವರಾಜ್

Update: 2019-04-18 14:17 GMT

ಅಹ್ಮದಾಬಾದ್, ಎ.18: ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಬಾಲಕೋಟ್ ನಲ್ಲಿ ಐಎಎಫ್ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಸೈನಿಕರಾಗಲೀ, ನಾಗರಿಕರಾಗಲೀ ಸತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಸ್ವರಕ್ಷಣೆಗಾಗಿ ಏರ್ ಸ್ಟ್ರೈಕ್ ನಡೆಸಲಾಗಿತ್ತು ಎಂದವರು ಹೇಳಿದರು. “ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆ ನಾವು ವಾಯುದಾಳಿ ನಡೆಸಿದಾಗ, ಇದು ಸ್ವರಕ್ಷಣೆಗಾಗಿ ತೆಗೆದುಕೊಂಡ ಕ್ರಮ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಹೇಳಿದ್ದೆವು. ದಾಳಿಯ ಸಂದರ್ಭ ಯಾವುದೇ ಪಾಕಿಸ್ತಾನಿ ಸೈನಿಕ ಅಥವಾ ನಾಗರಿಕರಿಗೆ ತೊಂದರೆಯಾಗಬಾರದು ಎಂದು ಸೇನಾಪಡೆಗೆ ತಿಳಿಸಿದ್ದೆವು ಎನ್ನುವುದನ್ನೂ ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದ್ದೇವೆ” ಎಂದವರು ಹೇಳಿದರು.

“ಪುಲ್ವಾಮ ದಾಳಿಯ ಜವಾಬ್ದಾರಿ ಹೊತ್ತುಕೊಂಡ ಜೈಶ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವುದು ಮಾತ್ರ ನಮ್ಮ ಉದ್ದೇಶವಾಗಿತ್ತು” ಎಂದು ಸುಷ್ಮಾ ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News