ಅಝಂಗಡ: ಅಖಿಲೇಶ್ ಯಾದವರಿಂದ ನಾಮಪತ್ರ ಸಲ್ಲಿಕೆ

Update: 2019-04-18 15:45 GMT

ಅಝಂಗಡ(ಉ.ಪ್ರ),ಎ.18: ಸಮಾಜವಾದಿ ಪಾರ್ಟಿಯ ವರಿಷ್ಠ ಅಖಿಲೇಶ್ ಯಾದವ ಅವರು ಗುರುವಾರ ಅಝಂಗಡ ಲೋಕಸಭಾ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಿದರು.

ಬೆಳಿಗ್ಗೆ  ಬಿಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಸತೀಶಚಂದ್ರ ಮಿಶ್ರಾ ಅವರೊಂದಿಗೆ ಇಲ್ಲಿಗೆ ಆಗಮಿಸಿದ ಅಖಿಲೇಶ್‌ರನ್ನು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಬೆಂಬಲಿಗರು ಭರ್ಜರಿಯಾಗಿ ಸ್ವಾಗತಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ತನ್ನ ಸರಕಾರವು ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಜನರು ಮತ ಚಲಾಯಿಸಲಿದ್ದಾರೆ ಎಂದರು.

ಅಝಂಗಡ ಸಮಾಜವಾದಿಗಳ ಕರ್ಮಭೂಮಿಯಾಗಿದೆ ಎಂದ ಅವರು,ಜನರು ತನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

2014ರಲ್ಲಿ ತನ್ನ ತಂದೆ ಮುಲಾಯಂ ಸಿಂಗ್ ಯಾದವ ಅವರು ಗೆದ್ದಿದ್ದ ಅಝಂಗಡ ಕ್ಷೇತ್ರದಿಂದ ಸ್ಪರ್ಧಿಸಿರುವ ಅಖಿಲೇಶ್ ಬಿಜೆಪಿ ಅಭ್ಯರ್ಥಿ ಖ್ಯಾತ ಭೋಜಪುರಿ ನಟ ನಿರಹುವಾ ಯಾನೆ ದಿನೇಶಲಾಲ ಯಾದವ ಅವರನ್ನು ಎದುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಮೇ ೧೨ರಂದು ಅಝಂಗಡದಲ್ಲಿ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News