ಎಲ್ಲ ರಾಜ್ಯಪಾಲರು ಚಮಚಾಗಳು: ಸಂಜಯ್ ನಿರುಪಮ್

Update: 2019-05-11 16:15 GMT

ಹೊಸದಿಲ್ಲಿ, ಮೇ 11: ರಾಜೀವ್ ಗಾಂಧಿ ನಂ. 1 ಭ್ರಷ್ಟಾಚಾರಿ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಪಾಲ್ ಮಲಿಕ್ ಅನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ‘‘ಎಲ್ಲ ರಾಜ್ಯಪಾಲರ ಚಮಚಾಗಳು’’ ಎಂದಿದ್ದಾರೆ.

ನಮ್ಮ ದೇಶದ ರಾಜ್ಯಪಾಲರಾಗಿರುವ ಎಲ್ಲರೂ ಮೂಲತಃ ಸರಕಾರದ ಚಮಚಾಗಳು. ಸತ್ಪಾಲ್ ಮಲಿಕ್ ಕೂಡ ಚಮಚಾ. ಬೋಫರ್ಸ್‌ ಹಗರಣದಲ್ಲಿ ವಿವಿಧ ನ್ಯಾಯಾಲಯಗಳು ರಾಜೀವ್ ಗಾಂಧಿ ಅವರಿಗೆ ಕ್ಲೀನ್ ಚಿಟ್ ನೀಡಿವೆ. ಅವರಿಗೆ ಕ್ಲೀನ್ ಚಿಟ್ ನೀಡಿದವರಲ್ಲಿ ಕೇಂದ್ರದ ಹಣಕಾಸು ಸಚಿವ ಅರುಣ್ ಜೆಟ್ಲಿ ಕೂಡ ಸೇರಿದ್ದಾರೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ ಎಂದು ಹೇಳಿದಾಗ ಟೀಕೆ ಎದುರಿಸಿದರು. ಅವರಿಗೆ ತನ್ನ ಹೇಳಿಕೆ ಬಗ್ಗೆ ಅವಮಾನ ಆಗಿತ್ತು. ಅನಂತರ ಎಂದೂ ಅವರು ಆ ಹೇಳಿಕೆ ನೀಡಲಿಲ್ಲ. ಆದರೆ, ಸತ್ಪಾಲ್ ಮಲಿಕ್ ಮೋದಿಯನ್ನು ತೃಪ್ತಿಪಡಿಸಲು ಅವರ ಹೇಳಿಕೆ ಬೆಂಬಲಿಸಿದರು. ಇದರಿಂದ ಅವರು ಇನ್ನು ಕೆಲವು ದಿನ ರಾಜ್ಯಪಾಲರ ಹುದ್ದೆ ಆಸ್ವಾದಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರು ಸ್ಥಾನದ ಗೌರವವನ್ನು ಎತ್ತಿ ಹಿಡಿಯಬೇಕು ಹಾಗೂ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸಂಜಯ್ ನಿರುಮಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News