ಮೋದಿಯ ಸೋಲು ಜಯಕ್ಕಿಂತ ದೊಡ್ಡ ಇತಿಹಾಸ ಬರೆಯಲಿದೆ: ಮಾಯಾವತಿ

Update: 2019-05-18 17:34 GMT

ಹೊಸದಿಲ್ಲಿ, ಮೇ 18: ಪೂರ್ವ ಉತ್ತರಪ್ರದೇಶದ ಅಭಿವೃದ್ಧಿ ಕುರಿತು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರ ಸೋಲು ಜಯಕ್ಕಿಂತ ದೊಡ್ಡ ಇತಿಹಾಸ ಬರೆಯಲಿದೆ ಎಂದಿದ್ದಾರೆ.

ಟ್ವಿಟ್ಟರ್‌ನಲ್ಲಿ ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ವಾಗ್ದಾಳಿ ನಡೆಸಿರುವ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಮಾದರಿ ಅಭಿವೃದ್ಧಿ ಉತ್ತರಪ್ರದೇಶದ ಪೂರ್ವಾಂಚಲ್ ವಲಯದಲ್ಲಿ ನಿರುದ್ಯೋಗ, ಹಿಂದುಳಿದಿರುವಿಕೆ ಹಾಗೂ ಬಡತನವನ್ನು ನಿರ್ಮೂಲನ ಮಾಡುವಲ್ಲಿ ಸಫಲವಾಗಿಲ್ಲ ಎಂದರು.

ಅಭಿವೃದ್ಧಿಯ ಬದಲು ಮೋದಿ-ಯೋಗಿ ಸರಕಾರದ ದೇಶದಲ್ಲಿ ಕೋಮು ಉದ್ವಿಗ್ನತೆ, ಹಿಂಸಾಚಾರ ದ್ವೇಷವನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

   ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮತ್ರಿ ಆದಿತ್ಯನಾಥ್ ಪೂರ್ವಾಂಚಲವನ್ನು ಪ್ರತಿನಿಧಿಸಿದರೂ ಜನರು ದ್ರೋಹ, ವಂಚನೆಗೆ ಒಳಗಾಗಿದ್ದಾರೆ ಎಂದು ಮಾಯಾವತಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News