ಬಿಜೆಪಿಯ ಗೆಲುವು ಭಾರತೀಯರ ಸೋಲು: ಹಾರ್ದಿಕ್ ಪಟೇಲ್

Update: 2019-05-23 15:55 GMT

ಹೊಸದಿಲ್ಲಿ, ಮೇ 23:  ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಭಾರತೀಯರ ಸೋಲು ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಹಾಗೂ ಪಟಿದಾರ್ ಆಂದೋಲನದ ಮುಂದಾಳು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಕಾಂಗ್ರೆಸ್ ಸೋತದ್ದಲ್ಲ , ಉದ್ಯೋಗ, ಶಿಕ್ಷಣ, ರೈತರು, ಮಹಿಳೆಯರ ಗೌರವ, ಪ್ರತಿಯೊಬ್ಬ ಜನಸಾಮಾನ್ಯರು ಸೋತಿದ್ದಾರೆ. ಇದ್ದ ಒಂದು ನಿರೀಕ್ಷೆಗೂ ಸೋಲುಂಟಾಗಿದೆ. ಭಾರತೀಯರು ಸೋತಿದ್ದಾರೆ . ತೀವ್ರ ಹೋರಾಟ ನಡೆಸಿದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಾವು ಹೋರಾಟ ಮುಂದುವರಿಸುತ್ತೇವೆ ಮತ್ತು ಖಂಡಿತಾ ಗೆಲ್ಲುತ್ತೇವೆ ಎಂದವರು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷ(ಆಪ್) ಬಿಜೆಪಿಯನ್ನು ಅಭಿನಂದಿಸಿದ್ದು ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡುವರೆಂದು ತನಗೆ ವಿಶ್ವಾಸವಿದೆ ಎಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಅತ್ಯಂತ ಬಲಿಷ್ಟ ಎಂದು ಪರಿಗಣಿಸಲಾಗುತ್ತದೆ. ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ. ಪ್ರಧಾನಿ ಮೋದಿ ಮುಂದಿನ ಅಧಿಕಾರಾವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆಂದು ನಿರೀಕ್ಷಿಸುತ್ತಿದ್ದೇವೆ ಎಂದು ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News