ಮೋದಿ ಪ್ರಮಾಣ ವಚನಕ್ಕೆ ಪವಾರ್ ಗೈರಾಗಲು ಕಾರಣವೇನು ಗೊತ್ತಾ?

Update: 2019-05-31 16:07 GMT

ಮುಂಬೈ,ಮೇ 31: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಶಿಷ್ಟಾಚಾರದಂತೆ ತನಗೆ ಆಸನ ಹಂಚಿಕೆ ಮಾಡದ್ದಕ್ಕಾಗಿ ಗುರುವಾರ ಸಂಜೆ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ ಎಂದು ಪಕ್ಷವು ತಿಳಿಸಿದೆ.

ಪವಾರ್ ಅವರು ಕೇಂದ್ರ ಸಚಿವರಾಗಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿಸಿರುವ ಹಿರಿಯ ರಾಷ್ಟ್ರೀಯ ನಾಯಕರಾಗಿರುವ ಹಿನ್ನೆಲೆಯಲ್ಲಿ ಶಿಷ್ಟಾಚಾರವನ್ನು ಪಾಲಿಸದಿದ್ದುದು ಸರಿಯಲ್ಲ ಎಂದು ಎನ್‌ಸಿಪಿಯ ಮುಖ್ಯ ವಕ್ತಾರ ನವಾಬ್ ಮಲಿಕ್ ಅವರು ನಿರಾಶೆಯನ್ನು ವ್ಯಕ್ತಪಡಿಸಿದರು.

ಪವಾರ್ ಅವರಿಗೆ ಐದನೇ ಸಾಲಿನಲ್ಲಿ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತೋ ಅಥವಾ ತಪ್ಪಿನಿಂದಾಗಿ ಸಂಭವಿಸಿತ್ತೋ ಗೊತ್ತಿಲ್ಲ,ಆದರೆ ಅವರು ಹಿರಿಯ ನಾಯಕರಾಗಿರುವ ಹಿನ್ನೆಲೆಯಲ್ಲಿ ಇದು ಸರಿಯಲ್ಲ ಎಂದು ಮಲಿಕ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News