ನೂತನ ವಿತ್ತ ಸಚಿವೆಗೆ ಅಭಿನಂದನೆ ಸಲ್ಲಿಸಿ ಜಿಡಿಪಿ ಉಲ್ಲೇಖಿಸಿದ ದಿವ್ಯಾ ಸ್ಪಂದನಾ

Update: 2019-06-01 06:57 GMT

ಹೊಸದಿಲ್ಲಿ, ಮೇ 31: ಭಾರತದ ರಾಜಕೀಯ ಇತಿಹಾಸದಲ್ಲಿ ಕೇಂದ್ರ ವಿತ್ತ ಸಚಿವೆಯಾಗಿ ಆಯ್ಕೆಯಾಗಿರುವ ಎರಡನೇ ಮಹಿಳೆಯಾಗಿರುವ ನಿರ್ಮಲಾ ಸೀತಾರಾಮನ್‌ಗೆ ಶುಕ್ರವಾರ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ವಕ್ತಾರೆ ದಿವ್ಯಾ ಸ್ಪಂದನಾ, ದೇಶದ ಅಭಿವೃದ್ಧಿಗೆ ನಿರ್ಮಲಾ ಉತ್ತಮ ವಾಗಿ ಕಾರ್ಯನಿರ್ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ದೇಶದ ಪ್ರಸಕ್ತ ಆರ್ಥಿಕ ಬೆಳವಣಿಗೆ ಕುರಿತು ಟ್ವೀಟ್‌ನಲ್ಲಿ ಉಲ್ಲೇಖಿಸಿದರು.

‘‘1970ರಲ್ಲಿ ಇಂದಿರಾ ಗಾಂಧಿ ವಿತ್ತ ಸಚಿವೆಯಾಗಿದ್ದರು. ಅವರ ಬಳಿಕ ಇದೀಗ ವಿತ್ತ ಸಚಿವೆಯಾಗಿರುವ ನಿಮಗೆ ಅಭಿನಂದನೆಗಳು. ನೀವು ಮಹಿಳೆಯರಿಗೆ ಹೆಮ್ಮೆ ತಂದಿದ್ದೀರಿ! ಜಿಡಿಪಿ ಉತ್ತಮವಾಗಿ ಕಾಣುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಉತ್ತಮ ನಿರ್ವಹಣೆ ತೋರುವ ವಿಶ್ವಾಸ ನನಗಿದೆ. ನಮ್ಮ ಬೆಂಬಲ ನಿಮಗಿರಲಿದೆ. ಶುಭಾಶಯಗಳು’’ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಜನವರಿ-ಮಾರ್ಚ್ ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.5.8ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News