ಅಪಘಾತದಲ್ಲಿ ಜಗತ್ ವಿಖ್ಯಾತ ಜನಪದ ನೃತ್ಯ ಕಲಾವಿದ ಕ್ವೀನ್ ಹರೀಶ್ ಸಾವು

Update: 2019-06-02 14:58 GMT

 ಜೋಧಪುರ, ಜೂ. 2: ರಾಜಸ್ಥಾನದ ಜೋಧ್‌ಪುರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಗದ್ವಿಖ್ಯಾತ ನೃತ್ಯಗಾರ ಕ್ವೀನ್ ಹರೀಶ್ ಹಾಗೂ ಇತರ ಮೂವರು ಜನಪದ ಕಲಾವಿದರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ.

ಎಸ್‌ಯುವಿ ವಾಹನದಲ್ಲಿ ಜೈಸಲ್ಮಾರ್‌ನಿಂದ ಅಜ್ಮೀರ್‌ಗೆ ತೆರಳುತ್ತಿದ್ದ ಸಂದರ್ಭ ಜೋಧಪುರ ಹೆದ್ದಾರಿಯ ಕಪಾರ್ಡ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ.

   ‘‘ಅವರ ವಾಹನ ಸ್ಟೇಶನರಿ ಟ್ರಕ್‌ಗೆ ಢಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ರವೀಂದ್ರ, ಭಿಖೆ ಖಾನ್ ಹಾಗೂ ಲತೀಫ್ ಖಾನ್ ಮೃತಪಟ್ಟರು. ಐದು ಮಂದಿ ಗಾಯಗೊಂಡರು’’ ಎಂದು ಬಿಲಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸೀತಾರಾಮ್ ಖೋಜಾ ತಿಳಿಸಿದ್ದಾರೆ.

 ಹರೀಶ್ ಹಾಗೂ ಜಾನಪದ ಕಲಾವಿದರನ್ನು ಒಳಗೊಂಡ ತಂಡ ಕಾರ್ಯಕ್ರಮ ನೀಡುವ ಉದ್ದೇಶದಿಂದ ಅಜ್ಮೀರ್‌ಗೆ ತೆರಳುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

 ಜೈಸಲ್ಮಾರ್‌ನ ನಿವಾಸಿ ಹರೀಶ್ ಕುಮಾರ್ ಕ್ವೀನ್ ಹರೀಶ್ ಎಂದು ಜನಪ್ರಿಯರಾಗಿದ್ದಾರೆ. ಜಾನಪದ ನೃತ್ಯಕ್ಕಾಗಿ ಅವರು ಜಗತ್ಪ್ರಸಿದ್ಧಿ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News