ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ 7 ಮಂದಿ ಮೃತ್ಯು

Update: 2019-06-15 07:27 GMT

ಮುಂಬೈ, ಜೂ.15: ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರು ಸ್ವಚ್ಛತಾ ಕಾರ್ಮಿಕರು ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ವಡೋದರಾದಿಂದ 30 ಕಿ.ಮೀ. ದೂರದಲ್ಲಿರುವ ಫರ್ತಿಕು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಮೂವರು ಹೊಟೇಲ್ ಕಾರ್ಮಿಕರು ಸೇರಿದ್ದಾರೆ.

“ಓರ್ವ ಸ್ವಚ್ಛತಾ ಕಾರ್ಮಿಕನಿಗೆ ಹೊರಬರಲು ಸಾಧ್ಯವಾಗದೇ ಇದ್ದಾಗ ಉಳಿದವರು ಒಳ ಹೋಗಿದ್ದರು. ಉಸಿರುಗಟ್ಟಿ ಎಲ್ಲರೂ ಮೃತಪಟ್ಟಿದ್ದಾರೆ” ಎಂದು ಜಿಲ್ಲಾ ಕಲೆಕ್ಟರ್ ಕಿರಣ್ ಝವೇರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News