ಪತ್ನಿ, ಮೂವರು ಮಕ್ಕಳ ಕತ್ತು ಸೀಳಿ ಕೊಲೆಗೈದ !

Update: 2019-06-22 14:20 GMT

ಹೊಸದಿಲ್ಲಿ, ಜೂ. 22: ದಕ್ಷಿಣ ದಿಲ್ಲಿಯ ಮೆಹ್ರೌಲಿಯಲಿ ಎರಡು ತಿಂಗಳ ಹೆಣ್ಣು ಮಗು ಸೇರಿದಂತೆ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಹತ್ಯೆಗೈದು ಪತ್ರವೊಂದನ್ನು ಇರಿಸಿ ಪತಿ ಪರಾರಿಯಾಗಿರುವ ಘಟನೆ ನಡೆದಿದೆ.

 ಅನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಖಾಸಗಿ ಟ್ಯೂಶನ್ ನೀಡುವ ಅಧ್ಯಾಪಕ ಉಪೇಂದ್ರ ಶುಕ್ಲಾ ಎಂದು ಗುರುತಿಸಲಾಗಿದೆ. ಆತ ತಾನು ತನ್ನ ಕುಟುಂಬದ ಸದಸ್ಯರನ್ನು ಹತ್ಯೆಗೈದಿರುವುದಾಗಿ ಪತ್ರ ಇರಿಸಿದ್ದ. ಆದರೆ, ಅದರಲ್ಲಿ ಹತ್ಯೆ ನಡೆಸಲು ಯಾವುದೇ ಕಾರಣವನ್ನು ತಿಳಿಸಿರಲಿಲ್ಲ.

 ಶನಿವಾರ 2 ಗಂಟೆ ಹೊತ್ತಿಗೆ ಶುಕ್ಲಾ ತನ್ನ ಕುಟುಂಬದ ಸದಸ್ಯರ ಕತ್ತು ಕತ್ತರಿಸಿ ಹತ್ಯೆಗೈದಿದ್ದಾನೆ. ಹತ್ಯೆಗೈಯಲು ಬಳಸಿದ ಚೂರಿ ಕೂಡ ಅಲ್ಲೇ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News