Breaking News: ಡಿ.ಕೆ. ಶಿವಕುಮಾರ್ ರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು

Update: 2019-07-10 09:14 GMT

ಮುಂಬೈ, ಜು.10: ಅತೃಪ್ತ ಶಾಸಕರನ್ನು ಭೇಟಿಯಾಗಲು ಇಲ್ಲಿನ ರಿನೈಸೆನ್ಸ್ ಹೋಟೆಲ್ ಮುಂಭಾಗ ಸತತ 6 ಗಂಟೆಗಳಿಂದ ಕಾಯುತ್ತಿದ್ದ ಡಿ.ಕೆ.ಶಿವಕುಮಾರ್ ರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೈತ್ರಿ ಸರಕಾರದ ಪತನವನ್ನು ತಡೆಯಲು ಡಿಕೆಶಿ ಮುಂಬೈಗೆ ತೆರಳಿದ್ದು, ಶಾಸಕರನ್ನು ಭೇಟಿಯಾಗುವುದಾಗಿ ಹಠ ಹಿಡಿದಿದ್ದರು. ಜಿಟಿ ದೇವೇಗೌಡ ಮತ್ತು ಶಿವಲಿಂಗೇಗೌಡ ಡಿಕೆಶಿಗೆ ಸಾಥ್ ನೀಡಿದ್ದರು. ಶಾಂತಿಯುತ ಧರಣಿ ಕುಳಿತಿದ್ದ ಡಿಕೆಶಿಯವರನ್ನು ಏಕಾಏಕಿ ಮುಂಬೈ ಪೊಲೀಸರು ವಶಕ್ಕೆ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News