‘‘ನಮ್ಮ ಸೂಚನೆಯವರೆಗೆ ಸಮಾಧಾನದಿಂದ ಇರಿ’’
Update: 2019-07-25 05:50 GMT
ಹೊಸದಿಲ್ಲಿ, ಜು.25: ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗವೊಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಮಾತುಕತೆ ಅಂತ್ಯಗೊಂಡಿದೆ.
ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಜೊತೆ ಶೆಟ್ಟರ್ ನೇತೃತ್ವದ ನಿಯೋಗ ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿತು. ಈ ವೇಳೆ ನಮ್ಮ ಸೂಚನೆಯವರೆಗೆ ಸ್ವಲ್ಪ ಸಮಾಧಾನದಿಂದ ಇರಿ ಎಂದು ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ನಿಯೋಗವು ಅಪರಾಹ್ನ 3 ಗಂಟೆಗೆ ಮತ್ತೊಮ್ಮೆ ಅಮಿತ್ ಶಾ ಅವರನ್ನು ಭೇಟಿಯಾಗಲು ತೀರ್ಮಾನಿಸಿದೆ.
ನಿಯೋಗದಲ್ಲಿ ಶಾಸಕ ಜೆ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ ಹಾಗೂ ಯಡಿಯೂರಪ್ಪರ ಪುತ್ರ ವಿಜಯೇಂದ್ರ ಇದ್ದಾರೆ.