BREAKING NEWS: ​ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ, ಸಜ್ಜಾದ್ ಲೋನ್ ರಿಗೆ ಗೃಹಬಂಧನ

Update: 2019-08-04 19:39 GMT

ಶ್ರೀನಗರ, ಆ. 5: ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರಾದ‌ ಮೆಹಬೂಬ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಸಜ್ಜಾದ್ ಲೋನ್‌ ರಿಗೆ ರವಿವಾರ ತಡರಾತ್ರಿ ಗೃಹಬಂಧನ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಅಮರನಾಥ ಯಾತ್ರಾರ್ಥಿಗಳು ರಾಜ್ಯದಿಂದ ಹಿಂದಿರುಗುವಂತೆ ಕೇಂದ್ರ‌ ಸರಕಾರ ಆದೇಶಿಸಿತ್ತು. ನಂತರ ರಾಜ್ಯದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News