ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಸಿಡಬ್ಲ್ಯುಸಿ ಸಭೆ : ಖರ್ಗೆ , ವಾಸ್ನಿಕ್ ನಡುವೆ ಸ್ಪರ್ಧೆ ?

Update: 2019-08-10 06:42 GMT

ಹೊಸದಿಲ್ಲಿ, ಆ.10: ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ತೆರವಾಗಿರುವ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಇಂದು ನೂತನ ಅಧ್ಯಕ್ಷರ ಆಯ್ಕೆ ಗೆ ಸಿಡಬ್ಲ್ಯುಸಿ ಸಭೆ ಶನಿವಾರ ಬೆಳಗ್ಗೆ ಆರಂಭಗೊಂಡಿದೆ.ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಕುಲ್ ವಾಸ್ನಿಕ್  ಹೆಸರು   ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿದೆ.

ಯುಪಿಎ ಅಧ್ಯಕ್ಷೆ  ಅಧ್ಯಕ್ಷೆ ಸೋನಿಯಾ ಗಾಂಧಿ,  ರಾಹುಲ್ ಗಾಂಧಿ ,ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ , ಪಕ್ಷದ ಹಿರಿಯ ನಾಯಕರಾದ ಪಿ. ಚಿದಂಬರಮ್ , ಗುಲಾಮ್ ನಬಿ ಅಜಾದ್ , ಹರೀಶ್ ರಾವತ್, ಮೀರಾ ಕುಮಾರ್ , ಅಹ್ಮದ್ ಪಟೇಲ್. ರಣದೀಪ್ ಸುರ್ಜಿವಾಲಾ , ಕೆ.ಸಿ. ವೇಣುಗೋಪಾಲ್  ಸಭೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News