ಆಂಧ್ರ: ಪತ್ನಿಯ ತಲೆ ಕಡಿದು ಕಾಲುವೆಗೆ ಎಸೆದ ಪತಿ

Update: 2019-08-12 05:16 GMT

ವಿಜಯವಾಡ, ಆ.12: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು, ಕಾಲುವೆಯೊಂದಕ್ಕೆ ಎಸೆದಿರುವ ಆಘಾತಕಾರಿ ಘಟನೆ ವಿಜಯವಾಡದಲ್ಲಿ ರವಿವಾರ ನಡೆದಿದೆ.

  ಸತ್ಯನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಪ್ರದೀಪ್ ಕುಮಾರ್ ಎಂಬಾತ ಮನೆಯಲ್ಲಿ ತನ್ನ ಪತ್ನಿ ಮಣಿಕಾಂತಿ(23 ವರ್ಷ)ಅವರ ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಪತ್ನಿಯ ರುಂಡವನ್ನು ದೇಹದಿಂದ ಬೇರ್ಪಡಿಸಿದ್ದ ಕುಮಾರ್ ಒಂದು ಕೈಯ್ಯಲ್ಲಿ ರುಂಡ ಮತ್ತೊಂದು ಕೈಯ್ಯಲ್ಲಿ ಚಾಕು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಕಾಲನಿಯಲ್ಲಿರುವ ಸಿಸಿಟಿವಿಯಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದೆ. ಪತ್ನಿಯ ರುಂಡವನ್ನು ಕಾಲುವೆಗೆ ಎಸೆದ ಕುಮಾರ್, ಸತ್ಯನಾರಾಯಣ ಪೊಲೀಸ್ ಸ್ಟೇಶನ್‌ನಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪ್ರಾಥಮಿಕ ತನಿಖೆಯ ಪ್ರಕಾರ ಪ್ರದೀಪ್ ಐದು ವರ್ಷಗಳ ಹಿಂದೆ ಮಣಿಕಾಂತಿಯನ್ನು ಪ್ರೇಮವಿವಾಹವಾಗಿದ್ದ. ಆದರೆ,ದಂಪತಿಯ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು. ಕೆಲವು ಸಮಯದ ಹಿಂದೆ ಪ್ರದೀಪ್ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಕಿರುಕುಳದ ದೂರು ನೀಡಿದ್ದರು. ಪ್ರದೀಪ್‌ರನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪ್ರದೀಪ್ ತನ್ನ ಪತ್ನಿಯನ್ನು ಸಾಯಿಸಿ ಸೇಡು ತೀರಿಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News