ಚಿನ್ಮಯಾನಂದ್ ಆರೋಗ್ಯ ತಪಾಸಣೆ ನಡೆಸಿದ ತಜ್ಞ ವೈದ್ಯರ ತಂಡ

Update: 2019-09-17 09:28 GMT

ಹೊಸದಿಲ್ಲಿ, ಸೆ.17: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ಅವರು ಸೋಮವಾರ ರಾತ್ರಿ ಅವರ ಆಶ್ರಮದಲ್ಲಿ ವೈದ್ಯರ ತಂಡದಿಂದ ತಪಾಸಣೆಗೆ ಒಳಗಾಗಿದ್ದರು.

ಹೃದ್ರೋಗ ತಜ್ಞ ಕೆ ಸಿ ವರ್ಮಾ ಅವರೊಂದಿಗೆ ಕೇಂದ್ರ ಕೇಂದ್ರದ ಮಾಜಿ ಸಚಿವರನ್ನು ಪರೀಕ್ಷಿಸಲಾಗಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯ ಪ್ರೊಫೆಸರ್ ಎಂ ಎಲ್ ಅಗರ್ವಾಲ್ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಅಸೌಖ್ಯದಿಂದ  ಬಳಲುತ್ತಿರುವ ಚಿನ್ಮಯಾನಂದ್ ಅವರು ಸಂಜೆ  ಅಸೌಖ್ಯದ ಬಗ್ಗೆ  ದೂರು ನೀಡಿದ ನಂತರ ಸರ್ಕಾರಿ ಮತ್ತು ಖಾಸಗಿ ವೈದ್ಯರ ತಂಡ  ಅವರನ್ನು ಪರೀಕ್ಷಿಸಿತು.

ಬಿಜೆಪಿ ನಾಯಕ ಚಿನ್ಮಯಾನಂದ್ ರಿಗೆ  ಚಿಕಿತ್ಸೆ ನೀಡಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತನ್ನ ವಿರುದ್ಧ ಅತ್ಯಾಚಾರ ಆರೋಪಗಳನ್ನು ಹೊರಿಸಿದ್ದ ಕಾನೂನು ವಿದ್ಯಾರ್ಥಿನಿ ಮತ್ತು ಆಕೆಳನ್ನು ಬೆಂಬಲಿಸಿದವರು ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ ನಂತರ ಬಂಧನವನ್ನು ತಪ್ಪಿಸಲು ಚಿನ್ಮಯಾನಂದ್ ಮಾಡಿದ ಪ್ರಯತ್ನ ಎಂದು ವಿದ್ಯಾರ್ಥಿನಿ ಪರ ಹೇಳಿಕೆ ನೀಡಿದವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿದ್ಯಾರ್ಥಿನಿಯನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದು, ಆಕೆಯ ಹೇಳಿಕೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗೀತಿಕಾ ಸಿಂಗ್ ಅವರ ಮುಂದೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News