ಗ್ರಹಾಂ ಸ್ಟೈನ್ಸ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

Update: 2019-09-21 17:29 GMT

ಹೊಸದಿಲ್ಲಿ, ಸೆ. 21: ಇಪ್ಪತ್ತು ವರ್ಷಗಳ ಹಿಂದಿನ ಗ್ರಹಾಂ ಸ್ಟೈನ್ಸ್ ಹತ್ಯೆ ಪ್ರಕರಣದ ಇನ್ನೋರ್ವ ಆರೋಪಿಯನ್ನು ಸಿಬಿಐ ಗುರುವಾರ ಬಂಧಿಸಿದೆ.

ಪ್ರಧಾನ ಆರೋಪಿ ದಾರಾ ಸಿಂಗ್‌ನ ಸಹವರ್ತಿಯಾಗಿರುವ ಬುದ್ಧದೇವ್ ನಾಯಕ್ (45)ನನ್ನು ಗ್ರಹಾಂ ಸ್ಟೈನ್ಸ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಮಯೂರ್‌ಭಂಜ್ ಜಿಲ್ಲೆಯ ಥಾಕುರ್‌ಮುಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ನಿಶ್ಚಿತಪುರ ಗ್ರಾಮದಲ್ಲಿರುವ ನಿವಾಸದಿಂದ ಆತನನ್ನು ಬಂಧಿಸಲಾಗಿದೆ. ಆತನ ಉಪಸ್ಥಿತ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ಆತನ ಮನೆ ಮೇಲೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.

1999 ಜನವರಿ 22ರಂದು ಕಿಯೋಂಝಾರ್‌ನ ಮನೋಹರ್‌ಪುರ ಗ್ರಾಮದಲ್ಲಿರುವ ಚರ್ಚ್‌ನ ಎದುರು ನಿಲ್ಲಿಸಲಾಗಿದ್ದ ವಾಹನದಲ್ಲಿ ಮಲಗಿದ್ದ ಸ್ಟೈನ್ಸ್ ಹಾಗೂ ಅವರ ಇಬ್ಬರು ಪುತ್ರರಾದ ಫಿಲಿಪ್, ತಿಮೋತಿಯನ್ನು ಬೆಂಕಿ ಹಚ್ಚಿ ಹತ್ಯೆ ನಡೆಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ದಾರಾ ಸಿಂಗ್ ಹಾಗೂ ಆತನ ಸಹವರ್ತಿ ಮಹೇಂದ್ರ ಹೆಂಬ್ರಾಮ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇತರ 11 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News