ಸೂಪರ್ ಓವರ್ ನಿಯಮ ಬದಲಾವಣೆ: ಸಚಿನ್ ತೆಂಡುಲ್ಕರ್ ಸ್ವಾಗತ

Update: 2019-10-16 18:49 GMT

ಹೊಸದಿಲ್ಲಿ,ಅ.16: ವಿಶ್ವಕಪ್‌ನಂತಹ ಮಹತ್ವದ ಪಂದ್ಯಗಳ ನಾಕೌಟ್ ಹಂತದಲ್ಲಿ ಟೈ ಆದ ಪಂದ್ಯಗಳ ಫಲಿತಾಂಶ ನಿರ್ಧರಿಸಲು ಬಳಸಲಾಗುವ ಸೂಪರ್ ಓವರ್ ನಿಯಮದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬದಲಾವಣೆ ಮಾಡಿದ್ದು ಇದನ್ನು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸ್ವಾಗತಿಸಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಟೈ ಆದ ಪಂದ್ಯಗಳ ಫಲಿತಾಂಶವನ್ನು ನಿರ್ಧರಿಸಲು ಬೌಂಡರಿ ಲೆಕ್ಕ ಹಾಕುವ ಐಸಿಸಿಯ ನಿಯಮದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಡಳಿ ಈ ಬದಲಾವಣೆ ಮಾಡಿದೆ. ಈ ನಿಯಮದಲ್ಲಿ ಬದಲಾವಣೆ ಮಾಡುವಂತೆ ತೆಂಡುಲ್ಕರ್ ಮೊಟ್ಟಮೊದಲ ಬಾರಿ ಐಸಿಸಿಗೆ ಸಲಹೆ ನೀಡಿದ್ದರು. ಇದೀಗ ತನ್ನ ನಿಯಮದಲ್ಲಿ ಬದಲಾವಣೆ ಮಾಡಿರುವ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಒಂದು ತಂಡ ಜಯ ಗಳಿಸುವವರೆಗೆ ಎರಡೂ ತಂಡಗಳು ಆಡುವುದನ್ನು ಮುಂದುವರಿಸಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News