ತಿರುಗೇಟು!

Update: 2019-10-16 18:59 GMT

ಮಾನ್ಯರೇ,

ಪತ್ರಿಕೆಗಳಲ್ಲಿ ಬರುವ ರಾಜಕೀಯ, ಸಾಮಾಜಿಕ ವರದಿಗಳಲ್ಲಿ-‘‘ಉತ್ತರ ನೀಡಿದರು’’, ‘‘ಪ್ರತ್ಯಾರೋಪ ಮಾಡಿದರು’’ ಇದು ತಪ್ಪು, ಅಪಪ್ರಯೋಗ ಮತ್ತು ಅನುಚಿತ. ತಿರುಗೇಟು ಎಂಬುದು ಹಿಂಸೃ, ಭಾಷಾ ಹಿಂಸೆ. ಅದು ತಪ್ಪು ಎಂದು ತಿಳಿಯದಷ್ಟು ಸಹಜವಾಗಿರುವುದು ಇನ್ನೂ ಆತಂಕಕಾರಿ. ಮೋದಿಯವರಿಗೆ ರಾಹುಲ್ ಗಾಂಧಿ, ದೇವೇಗೌಡರಿಗೆ ಯಡಿಯೂರಪ್ಪ, ಒಬ್ಬ ಲೇಖಕನಿಗೆ ಇನ್ನೊಬ್ಬ ನೀಡುವುದು ತಿರುಗೇಟೇ? ಉತ್ತರವೇ?-ಎಲ್ಲ ಮಾಧ್ಯಮಗಳ ಲೇಖಕರು ಯೋಚಿಸಬೇಕು. ರಾಜಕೀಯದವರಿಗೆ ಭಾಷಾ ಮರ್ಯಾದೆ ಬೋಧಿಸುವ ಮಾಧ್ಯಮಗಳಿಗೆ ನಿಯಮಗಳಿಲ್ಲವೇ?

- ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News