ಮಾಜಿ ಸಿವಿಸಿ ಕೆವಿ ಚೌಧರಿ ರಿಲಯನ್ಸ್ ನಿರ್ದೇಶಕರ ಮಂಡಳಿಗೆ ನೇಮಕ

Update: 2019-10-19 17:55 GMT

ಹೊಸದಿಲ್ಲಿ, ಅ.19: ಕೇಂದ್ರ ಜಾಗೃತಿ ಆಯೋಗ(ಸಿವಿಸಿ)ದ ಮಾಜಿ ಆಯುಕ್ತ ಕೆವಿ ಚೌಧರಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಆಡಳಿತ ಮಂಡಳಿಗೆ ನೇಮಕ ಮಾಡಿರುವುದಾಗಿ ಸಂಸ್ಥೆಯ ಹೇಳಿಕೆ ತಿಳಿಸಿದೆ.

ಸ್ಟಾಕ್ ಎಕ್ಸ್‌ಚೇಂಜ್ 2018ರ ಜೂನ್ 20ರಂದು ಜಾರಿಗೊಳಿಸಿದ ಸುತ್ತೋಲೆಯಂತೆ ಕೆವಿ ಚೌಧರಿಯನ್ನು ಕಾರ್ಯನಿರ್ವಾಹಕರಲ್ಲದ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಮುಕೇಶ್ ಅಂಬಾನಿ ಮಾಲಕತ್ವದ ಸಂಸ್ಥೆ ತಿಳಿಸಿದೆ.

   ಚೌಧರಿ ಭಾರತೀಯ ಕಂದಾಯ ಸೇವೆಯಲ್ಲಿ ಅಧಿಕಾರಿಯಾಗಿದ್ದರು ಹಾಗೂ ಕೇಂದ್ರ ಜಾಗೃತಿ ಆಯುಕ್ತರಾಗಿ 2015ರ ಜೂನ್‌ನಿಂದ 2019ರವರೆಗೆ ಕಾರ್ಯ ನಿರ್ವಹಿಸಿದ್ದರು. ಅವರ ಕಾರ್ಯಾವಧಿಯಲ್ಲಿ , ಸಿಬಿಐಯಲ್ಲಿ ಒಳಜಗಳ ಸೇರಿದಂತೆ ರಾಜಕೀಯವಾಗಿ ಸೂಕ್ಷ್ಮವಾದ ಹಲವು ಪ್ರಕರಣಗಳು ವಿವಾದಕ್ಕೆ ಕಾರಣವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News