ಕಾರು ಢಿಕ್ಕಿಯಾಗಿ ಪತ್ರಕರ್ತ ಸಾವು ಪ್ರಕರಣ: ಅಮಾನತುಗೊಂಡ ಐಎಎಸ್ ಅಧಿಕಾರಿ ಬಂಧನ

Update: 2019-11-12 16:26 GMT

ತಿರುವನಂತಪುರ, ನ. 12: ನಿರ್ಲಕ್ಷದಿಂದ ಕಾರು ಚಲಾಯಿಸಿ ಢಿಕ್ಕಿ ಹೊಡೆದು ಪತ್ರಕರ್ತರೋರ್ವರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀರಾಮ ವೆಂಕಟರಾಮನ್‌ನನ್ನು ಬಂಧಿಸಲಾಗಿದೆ ಎಂಬ ಪೊಲೀಸ್ ವರದಿಯನ್ನು ಸೋಮವಾರ ಕೇರಳ ವಿಧಾನ ಸಭೆಯಲ್ಲಿ ತಿಳಿಸಲಾಯಿತು.

 ಮಲೆಯಾಳಂ ದಿನ ಪತ್ರಿಕೆಯ ಪತ್ರಕರ್ತ 35ರ ಹರೆಯದ ಕೆ.ಎಂ. ಬಷೀರ್ ಅವರ ಸಾವಿಗೆ ಕಾರಣವಾದ ಆಗಸ್ಟ್ 3ರ ಅಪಘಾತದ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಸಾರಿಗೆ ಸಚಿವ ಎ.ಕೆ. ಶ್ರೀಧರನ್ ಈ ಪ್ರತಿಕ್ರಿಯೆ ನೀಡಿದರು. ಆದರೆ, ಘಟನೆ ಬಳಿಕ ಅಮಾನತುಗೊಂಡ ಅಧಿಕಾರಿಯನ್ನು ಪೊಲೀಸ್ ವರದಿಯಲ್ಲಿ ಸೂಚಿಸಲಾಗಿದೆ ಎಂದು ಸಚಿವರು ಹೇಳಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ಶ್ರೀರಾಮ್ ಹಾಗೂ ಘಟನೆ ಸಂದರ್ಭ ಕಾರಿನ ಒಳಗೆ ಇದ್ದ ಅವರ ಗೆಳತಿಯ ಚಾಲನಾ ಪರವಾನಿಗೆಯನ್ನು ಒಂದು ವರ್ಷಕ್ಕೆ ರದ್ದುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News