'ಪೆರಿಯಾರ್ ರಂತಹ ನಿಕೃಷ್ಟ ಜನರು' ಎಂದ 'ಪತಂಜಲಿ': ಆರೋಪ

Update: 2019-11-17 11:11 GMT

ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ ಹರಿದ್ವಾರ್ ಯೋಗಪೀಠ ಖಾತೆಯು ಸಮಾಜ ಸುಧಾರಕ ಪೆರಿಯಾರ್ ಅವರನ್ನು ಅವಮಾನಿಸಿದೆ ಎನ್ನುವ ಆರೋಪ ವ್ಯಕ್ತವಾಗಿದ್ದು, ಈ ಕುರಿತ ಟ್ವೀಟ್ ಒಂದು ವೈರಲ್ ಆಗಿದೆ.

"ಪೆರಿಯಾರ್ ರಂತಹ ನಿಕೃಷ್ಟ ಜನರು ಈ ದೇಶದ ಏಕತೆಯನ್ನು ಒಡೆದು ಹಾಕಿದರು" ಎಂದು ಬರೆದಿರುವ ಪತಂಜಲಿ ಯೋಗಪೀಠ ಹರಿದ್ವಾರ ಖಾತೆಯದ್ದು ಎನ್ನಲಾದ ಟ್ವೀಟ್ ನ ಸ್ಕ್ರೀನ್ ಶಾಟ್  ವೈರಲ್ ಆಗಿದೆ. ಈ ಬಗ್ಗೆ ಟ್ವಿಟರಿಗರು ಬಾಬಾ ರಾಮದೇವ್ ಮತ್ತು ಪತಂಜಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, #shutdownPatanjali, #BoycotPatanjaliProducts ,

ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News