ಆದಿತ್ಯನಾಥ್ ಸರಕಾರದಿಂದ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ: ರೈತರು-ಪೊಲೀಸರ ನಡುವೆ ಘರ್ಷಣೆ

Update: 2019-11-17 11:38 GMT

ಹೊಸದಿಲ್ಲಿ, ನ.17: ಜಿಲ್ಲೆಯಲ್ಲಿ ವಸತಿ ಯೋಜನೆಯೊಂದಕ್ಕೆ ಭೂಸ್ವಾಧೀನ ನಡೆಸಿದ ಆದಿತ್ಯನಾಥ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ.

ಗಂಗಾಸಿಟಿ ಯೋಜನೆಗಾಗಿ ಆದಿತ್ಯನಾಥ್ ಸರಕಾರವು ತಮ್ಮ ಭೂಮಿಯನ್ನು ಬಲವಂತದಿಂದ ಸ್ವಾಧೀನಗೈದಿದೆ ಎಂದು ರೈತರು ಆರೋಪಿಸಿದ್ದಾರೆ.

ಸ್ಮಾರ್ಟ್ ಸಿಟಿ ನಿರ್ಮಾಣಗೊಳ್ಳಲಿರುವ ಸ್ಥಳದಲ್ಲಿ ಜಮಾವಣೆಯಾದ ರೈತರು ಮತ್ತು ಪೊಲೀಸರ  ನಡುವೆ ಘರ್ಷಣೆ ನಡೆಯಿತು. ಕಲ್ಲುತೂರಾಟ ನಡೆದಿದ್ದು, ನಿರ್ಮಾಣ ಸಾಮಗ್ರಿಗಳಿಗೆ ಬೆಂಕಿ ಹಚ್ಚಲಾಯಿತು.

ಈ ಸಂದರ್ಭ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News