'ರಾಜಕೀಯ ಚಾಣಕ್ಯ'ನನ್ನು ಚತುರತೆಯಲ್ಲಿ ಮೀರಿಸಿದ ಶರದ್ ಪವಾರ್: ಎನ್ ಸಿಪಿ
Update: 2019-11-22 10:08 GMT
ಮುಂಬೈ: ಭಾರತದ ರಾಜಕಾರಣದ ಚಾಣಕ್ಯ ಎಂದು ಕರೆಸಿಕೊಳ್ಳುವ ವ್ಯಕ್ತಿಯನ್ನು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಚತುರತೆಯಿಂದ ಮೀರಿದ್ದಾರೆಂದು ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಎನ್ ಸಿಪಿ ಹೇಳಿಕೊಂಡಿದೆ.
ದಿಲ್ಲಿಯ ಪೀಠಕ್ಕೆ ಮಹಾರಾಷ್ಟ್ರವನ್ನು ಬಗ್ಗಿಸಲು ಸಾಧ್ಯವಾಗಿಲ್ಲ ಎಂದೂ ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಜೆಪಿ ಚುನಾವಣೆ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಚಾಣಕ್ಯ ಎಂದೇ ಬಣ್ಣಿಸಲಾಗುತ್ತಿರುವುದರಿಂದ ನವಾಬ್ ಮಲಿಕ್ ಅವರ ಟ್ವೀಟ್ ಶಾ ಅವರನ್ನೇ ಗುರಿಯಾಗಿಸಿದೆ ಎಂಬುದು ಸ್ಪಷ್ಟ.