ಅನಂತ್‌ನಾಗ್, ಶ್ರೀನಗರದಲ್ಲಿ ಗ್ರೆನೇಡ್ ದಾಳಿ: ಇಬ್ಬರು ಸಾವು, 11 ಮಂದಿಗೆ ಗಾಯ

Update: 2019-11-26 16:40 GMT
PTI

ಶ್ರೀನಗರ, ನ. 26: ಅನಂತ್‌ನಾಗ್ ಹಾಗೂ ಶ್ರೀನಗರ ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಗ್ರೇನೆಡ್ ದಾಳಿ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ವಾಗೂರಾ ಪ್ರದೇಶದಲ್ಲಿ ಸರಕಾರದ ‘ಗ್ರಾಮಕ್ಕೆ ಹಿಂದಿರುಗಿ ಕಾರ್ಯಕ್ರಮ’ ನಡೆಯುತ್ತಿರುವಾಗ ಉಗ್ರರು ಗ್ರೇನೆಡ್ ಎಸೆದೆ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶ್ರೀನಗರದಲ್ಲಿರುವ ಕಾಶ್ಮೀರ ವಿಶ್ವವಿದ್ಯಾನಿಲಯದ ಗೇಟೊಂದರ ಸಮೀಪ ಭಯೋತ್ಪಾದಕರು ಎಸೆದ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ 7 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ಕಾಶ್ಮೀರ ವಿಶ್ವವಿದ್ಯಾನಿಲಯದ ಸರ್ ಸಯ್ಯದ್ ಗೇಟ್ ಬಳಿ ಈ ಸ್ಫೋಟ ಸಂಭವಿಸಿದೆ. ಈ ಸಂದರ್ಭ ಅಲ್ಲಿ ನಿಂತದ್ದ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಫೋಟಕಗಳನ್ನು ಇರಿಸಿರುವ ಸಾಧ್ಯತೆ ಇರುವುದರಿಂದ ಎನ್‌ಕೌಂಟರ್ ವಲಯದ ಸಮೀಪ ತೆರಳದಂತೆ ಜಮ್ಮು ಹಾಗೂ ಪೊಲೀಸರು ಜನರಿಗೆ ಸೂಚನೆ ನೀಡಿದ ದಿನದ ಬಳಿಕ ಈ ದಾಳಿ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News