ರಾಹುಲ್ ಬಜಾಜ್ ಆತಂಕಕ್ಕೆ ದೇಶಾದ್ಯಂತ ಪರ ವಿರೋಧದ ಪ್ರತಿಕ್ರಿಯೆ

Update: 2019-12-02 18:23 GMT

ಹೊಸದಿಲ್ಲಿ,ಡಿ.2: ಭಾರತೀಯ ಉದ್ಯಮವಲಯವು ನರೇಂದ್ರ ಮೋದಿ ಸರಕಾರವನ್ನು ಟೀಕಿಸಲು ಭಯಪಡುತ್ತವೆ ಎಂಬ ಬಜಾಜ್ ಸಮೂಹ ಸಂಸ್ಥೆಯ ಚೇರ್‌ ಮನ್ ರಾಹುಲ್ ಬಜಾಜ್ ಅವರ ಹೇಳಿಕೆ ದೇಶಾದ್ಯಂತ ಪರ ವಿರೋಧದ ಅಲೆಯನ್ನು ಸೃಷ್ಟಿಸಿದೆ.

ಹಲವು ಉದ್ಯಮಿಗಳು ಬಜಾಜ್ ಹೇಳಿಕೆಯನ್ನು ಬೆಂಬಲಿಸಿದ್ದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಂತಹ ಹೇಳಿಕೆಯಿಂದ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಐಟಿ ಸೆಲ್ ಬಜಾಜ್ ವಿರುದ್ಧ ತಿರುಗಿ ಬಿದ್ದಿದೆ.

ತಂದೆಯ ಹೇಳಿಗೆ ಪುತ್ರ ರಾಹುಲ್ ಬಜಾಜ್ ಶ್ಲಾಘಿಸಿದ್ದಾರಾದರೂ, ಇದು ಭಂಡತನದ ಹೇಳಿಕೆಯೂ ಆದೀತು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News