ನಟಿ ಮಂಜು ವಾರಿಯರ್ ಬಗ್ಗೆ ಮಾನಹಾನಿಕರ ಹೇಳಿಕೆ: ನಿರ್ದೇಶಕನ ಬಂಧನ

Update: 2019-12-06 16:09 GMT

ತಿರುವನಂತಪುರ, ಡಿ. 6: ಸಾಮಾಜಿಕ ಜಾಲ ತಾಣದಲ್ಲಿ ನಟಿ ಮಂಜು ವಾರಿಯರ್ ಕುರಿತು ಮಾನಹಾನಿಕರ ಹೇಳಿಕೆ ಹಾಗೂ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಲಯಾಳಂ ಚಿತ್ರ ನಿರ್ದೇಶಕ ಶ್ರೀಕುಮಾರ್ ಮೆನನ್‌ರನ್ನು ತ್ರಿಶೂರ್‌ನಲ್ಲಿ ಗುರುವಾರ ಬಂಧಿಸಲಾಗಿದೆ. ಅನಂತರ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.

ಮಂಜು ವಾರಿಯರ್ ದೂರು ದಾಖಲಿಸಿದ ಹಾಗೂ ರಾಜ್ಯ ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರಾ ಅವರೊಂದಿಗೆ ಈ ವಿಷಯದ ಕುರಿತು ಮಾತುಕತೆ ನಡೆಸಿದ ಬಳಿಕ ಅಕ್ಟೋಬರ್‌ನಲ್ಲಿ ಮೆನನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ತನ್ನ ನಿಲುವನ್ನು ಪೊಲೀಸರಲ್ಲಿ ವಿವರಿಸಿದ್ದೇನೆ. ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ತನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾನು ಮಾಡಿರುವುದೆಲ್ಲ ಉತ್ತಮ ಉದ್ದೇಶದಿಂದ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News