ಕಟ್ಟಡದಲ್ಲಿ ಬೆಂಕಿ ಅವಘಡ: ತನ್ನ ಪ್ರಾಣ ಲೆಕ್ಕಿಸದೆ 11 ಜನರ ಪ್ರಾಣ ಉಳಿಸಿದ ರಾಜೇಶ್

Update: 2019-12-08 13:06 GMT

ಹೊಸದಿಲ್ಲಿ: ರಾಜೇಶ್ ಶುಕ್ಲಾ ಅವರು ಧೈರ್ಯ ತೋರಿ ಒಳನುಗ್ಗದೇ ಇರುತ್ತಿದ್ದರೆ ಇಲ್ಲಿನ ಕಟ್ಟಡವೊಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು. ತನ್ನ ಪ್ರಾಣವನ್ನೂ ಲೆಕ್ಕಿಸದೆ ಬೆಂಕಿಗಾಹುತಿಯಾದ ಕಟ್ಟಡದೊಳಕ್ಕೆ ನುಗ್ಗಿದ ಅಗ್ನಿಶಾಮಕ ಸಿಬ್ಬಂದಿ ರಾಜೇಶ್ 11 ಮಂದಿಯ ಪ್ರಾಣ ಉಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ರಾಜೇಶ್ ಗೆ ಗಾಯಗಳಾಗಿವೆ. ಇಂದು ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಹಲವು ಅಗ್ನಿಶಾಮಕ ಸಿಬ್ಬಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಹಲವರನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ.

ರಾಜೇಶ್ ಕರ್ತವ್ಯಪ್ರಜ್ಞೆ ಮತ್ತು ಧೈರ್ಯವನ್ನು ದಿಲ್ಲಿ ಗೃಹಸಚಿವ ಸತ್ಯೇಂದ್ರ ಜೈನ್ ಮೆಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಭೇಟಿಯಾಗಿದ್ದಾರೆ.

ಈ ಅಗ್ನಿ ಅನಾಹುತದಲ್ಲಿ 43 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News