ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಎದ್ದು ನಿಂತು ಕರ್ನಾಟಕದ ಜನತೆಗೆ ಗೌರವ ಸೂಚಿಸಿದ ಪ್ರಧಾನಿ

Update: 2019-12-11 14:21 GMT

ಹೊಸದಿಲ್ಲಿ, ಡಿ. 11: ಇಲ್ಲಿ ನಡೆದ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಉಪ ಚುನಾವಣೆಯಲ್ಲಿ ಮತ ಚಲಾಯಿಸಿ ಬಿಜೆಪಿ ಭರ್ಜರಿ ಜಯ ಗಳಿಸಲು ಕಾರಣರಾದ ಮತದಾರರಿಗೆ ಎದ್ದು ನಿಂತು ಗೌರವ ಸೂಚಿಸಿದರು.

‘‘ಸಭೆಯ ಸಂದರ್ಭ ನಾವು ಎದ್ದು ನಿಂತು ಪ್ರಧಾನಿ ಅವರನ್ನು ಸ್ವಾಗತಿಸಿದೆವು. ಆದರೆ, ಪ್ರಧಾನಿ ಅವರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕರ್ನಾಟಕದ ರಾಜ್ಯ ಸಚಿವರು ಹಾಗೂ ಬಿಜೆಪಿ ನಾಯಕರನ್ನು ಅಭಿನಂದಿಸಿದರು’’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಬಿಜೆಪಿಯ ಸಂಸದೀಯ ಪಕ್ಷದ ಸಭೆಯ ಬಳಿಕ ಸಂಸತ್ತಿನ ಗ್ರಂಥಾಲಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘‘ನಾವು ದಾಖಲಾರ್ಹ ಅಂತರದಲ್ಲಿ ಜಯ ಗಳಿಸಿದ್ದೇವೆ. ಈ ಹಿಂದೆ ಜಯ ಗಳಿಸದ ಎರಡು ಕ್ಷೇತ್ರಗಳಲ್ಲಿ ಕೂಡ ನಾವು ಇಂದು ಜಯ ಗಳಿಸಿದ್ದೇವೆ. ಪ್ರಧಾನಿ ಅವರು ಕರ್ನಾಟಕದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ಥಿರ ಸರಕಾರದೊಂದಿಗೆ ಅಭಿವೃದ್ಧಿ ತ್ವರಿತವಾಗಿ ನಡೆಯಲಿದೆ ಎಂದು ಪ್ರಧಾನಿ ಅವರ ನಿರೀಕ್ಷಿಸಿದ್ದಾರೆ’’ ಎಂದು ಮೋದಿ ಅವರನ್ನು ಉಲ್ಲೇಖಿಸಿ ಜೋಷಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News