ದೇಶವು ಪ್ರತಿಯೊಬ್ಬರಿಗೂ ಸೇರಿದ್ದು: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಮಹೇಶ್ ಭಟ್ ಬೆಂಬಲ

Update: 2019-12-19 07:03 GMT
ಫೈಲ್ ಫೋಟೊ

ಮುಂಬೈ, ಡಿ.15: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಮುಂಬೈಯಲ್ಲಿ ರವಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿರಿಯ ಚಿತ್ರ ನಿರ್ಮಾಪಕ, ನಿರ್ದೇಶಕ ಮಹೇಶ್‌ಭಟ್ ಅವರು ಈ ದೇಶವು ಪ್ರತಿಯೊಬ್ಬರಿಗೂ ಸೇರಿದ್ದಾಗಿದೆಯೆಂಬ ಸಂದೇಶವನ್ನು ಸಾರಲು ಜನತೆ ಒಗ್ಗೂಡುವುದಕ್ಕೆ ಇದು ಸಕಾಲವಾಗಿದೆಯೆಂದು ಅವರು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸವಾದ ರಾಜಗೃಹದಲ್ಲಿ ರವಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಭಟ್ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಂಜಯ್ ಜಾ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಹೇಶ್ ಭಟ್ ಅವರು, ಇದೀಗ ತಿರುವು ಬಂದಿದೆ. ಭಾರತವು ರವಿವಾರ ಬೆಳಗ್ಗೆ ಧ್ವನಿಯೆತ್ತಿದೆ. ಭಾರತದ ಆತ್ಮ ಜೀವಂತವಾಗಿದೆಯೆಂಬುದಕ್ಕೆ ನೀವೆಲ್ಲರೂ ಇಲ್ಲಿ ಜಮಾಯಿಸಿರುವುದು ಸಾಕ್ಷಿಯಾಗಿದೆಯೆಂದು ಅವರು ಹೇಳಿದ್ದಾರೆ.

ನಾವೆಲ್ಲರೂ ಪ್ರಮಾಣ ಮಾಡುವ ಹಾಗೂ ಬದುಕುತ್ತಿರುವ ಈ ಪವಿತ್ರವಾದ ದಾಖಲೆ (ಸಂವಿಧಾನ)ಯಲ್ಲಿ ಉಚ್ಚರಿಸಲಾದ ಭಾರತದ ಮಹಾನ್ ಚಿಂತನೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕಾಗಿದೆಯೆಂದು ಅವರು ಹೇಳಿದರು.

ಪ್ರತಿಊಭಟನಾ ಸಭೆಯಲ್ಲಿ ಭಾರತೀಯ ಸಂವಿಧಾನದ ಮುನ್ನುಡಿಯನ್ನು ಓದಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News