ಪೌರತ್ವ ಕಾಯ್ದೆ ವಿರುದ್ಧ ಭಾರೀ ಪ್ರತಿಭಟನೆ: ದಿಲ್ಲಿಯ ಹಲವೆಡೆ ಕರೆ, ಇಂಟರ್ ನೆಟ್, ಎಸ್ಸೆಮ್ಮೆಸ್ ಸೇವೆ ಸ್ಥಗಿತ

Update: 2019-12-19 07:27 GMT

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ದಿಲ್ಲಿಯ ಹಲವೆಡೆ ಇಂಟರ್ ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ದೂರು ನೀಡಿದ ಗ್ರಾಹಕರಿಗೆ ಏರ್ ಟೆಲ್ ಸರಕಾರದ ಆದೇಶದ ಮೇರೆಗೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಇಂಟರ್ ನೆಟ್, ವಾಯ್ಸ್  ಕಾಲ್, ಎಸ್ಸೆಮ್ಮೆಸ್ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.

"ಸರಕಾರ ಸೂಚನೆ ಮೇರೆಗೆ ನಿಮ್ಮ ವ್ಯಾಪ್ತಿಯಲ್ಲಿ ವಾಯ್ಸ್, ಇಂಟರ್ ನೆಟ್ ಮತ್ತು ಎಸ್ಸೆಮ್ಮೆಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರದ್ದು ಆದೇಶ ಹಿಂಪಡೆದ ಕೂಡಲೇ ಸೇವೆ ಮುಂದುವರಿಯಲಿದೆ" ಎಂದು ಏರ್ ಟೆಲ್ ಗ್ರಾಹಕರೊಬ್ಬರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News