ಇಂತಹ ಹಿಂಸಾಚಾರ ದೇಶದ ಸಿದ್ಧಾಂತಕ್ಕೆ ವಿರುದ್ಧವಾದದ್ದು: ಜೆಎನ್ ಯು ಪ್ರಕರಣದ ಬಗ್ಗೆ ಗಂಭೀರ್

Update: 2020-01-06 15:11 GMT

ಹೊಸದಿಲ್ಲಿ, ಜ. 6: ಜೆಎನ್ ಯು ಮೇಲಿನ ಗೂಂಡಾ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, 'ಇಂತಹ ಹಿಂಸಾಚಾರಗಳು ದೇಶದ ಸಿದ್ಧಾಂತಕ್ಕೆ ವಿರುದ್ಧವಾದದ್ದು' ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಗಳಲ್ಲಿ ನಡೆಯುವ ಇಂತಹ ಹಿಂಸಾಚಾರಗಳು ಈ ದೇಶದ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾದುದು. ನಮ್ಮ ಮನಸ್ಸಿನಲ್ಲಿ ಯಾವ ಸಿದ್ಧಾಂತ ಇದೆ ಎಂಬುದು ಮುಖ್ಯವಲ್ಲ. ಆದರೆ, ವಿದ್ಯಾರ್ಥಿಗಳನ್ನು ಈ ರೀತಿ ಗುರಿಯಾಗಿರಿಸಿ ದಾಳಿ ಮಾಡಬಾರದು. ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ಗೆ ಪ್ರವೇಶಿಸಿದ ಈ ಗೂಂಡಾಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News