'ನೀವು ಹೇಡಿಯೇ ಅಥವಾ ಪತ್ರಕರ್ತನೇ?': ವಿಮಾನದಲ್ಲಿ ಅರ್ನಬ್ ಗೋಸ್ವಾಮಿಯ ಬೆವರಿಳಿಸಿದ ಕುನಾಲ್ ಕಾಮ್ರಾ

Update: 2020-01-28 14:38 GMT

ಹೊಸದಿಲ್ಲಿ: ಪ್ರಸಿದ್ಧ ಕಾಮಿಡಿಯಲ್ ಕುನಾಲ್ ಕಾಮ್ರಾ ಅವರು ವಿಮಾನ ಪ್ರಯಾಣದ ವೇಳೆ ರಿಪಬ್ಲಿಟ್ ಟಿವಿಯ ಅರ್ನಬ್ ಗೋಸ್ವಾಮಿಯವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಬೆವರಿಳಿಸಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇಂದು ಕುನಾಲ್ ಕಾಮ್ರಾ ಅವರು ಲಕ್ನೋದಿಂದ ಇಂಡಿಗೋ ವಿಮಾನದಲ್ಲಿ ತೆರಳಿದ್ದು, ಇದೇ ವಿಮಾನದಲ್ಲಿ ಅರ್ನಬ್ ಇದ್ದರು. ಈ ಸಂದರ್ಭ ಕುನಾಲ್ 'ನಿಮ್ಮ ಪತ್ರಿಕೋದ್ಯಮದ ಬಗ್ಗೆ ಪ್ರಶ್ನೆಗಳಿವೆ' ಎಂದು ಮಾತನಾಡಿಸಲು ಮುಂದಾಗಿದ್ದಾರೆ. ಆದರೆ ಗೋಸ್ವಾಮಿಯ ಮೌನವಾಗಿ ಕುಳಿತಿದ್ದಾರೆ.

"ವೀಕ್ಷಕರೇ ಅರ್ನಬ್ ಗೋಸ್ವಾಮಿ ಹೇಡಿಯೇ ಅಥವಾ ರಾಷ್ಟ್ರವಾದಿಯೇ ಎಂದು ಇಂದು ತಿಳಿದುಕೊಳ್ಳಲು ಬಯಸಿದ್ದಾರೆ" ಎಂದು ಮಾತು ಆರಂಭಿಸಿದ ಕುನಾಲ್ ಹಲವು ಪ್ರಶ್ನೆಗಳಿಗೆ ಅರ್ನಬ್ ಗೆ ಕೇಳಿದ್ದಾರೆ. ರೋಹಿತ್ ವೇಮುಲಾಗಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದ ಕುನಾಲ್, ಈ ವಿಡಿಯೋ ಮಾಡುವುದಕ್ಕೂ ಮೊದಲು ಅರ್ನಬ್ ತನ್ನನ್ನು 'ಮಾನಸಿಕ ಅಸ್ವಸ್ಥ' ಎಂದು ಕರೆದಿದ್ದಾಗಿ ಆರೋಪಿಸಿದ್ದಾರೆ.

"ನಾನು ಟುಕ್ಡೆ, ಟುಕ್ಡೆ ನಿರೂಪಣೆಯ ಭಾಗ. ಅರ್ನಬ್ ನಿಮ್ಮ ಬಳಿ ಉತ್ತರವಿರಬೇಕು. ನೀವೊಬ್ಬ ಹೇಡಿಯೇ ಅಥವಾ ಪತ್ರಕರ್ತನೇ ಅಥವಾ ರಾಷ್ಟ್ರವಾದಿಯೇ?." ಎಂದವರು ಪ್ರಶ್ನಿಸಿದ್ದಾರೆ.

ಆದರೆ ಈ ಪ್ರಶ್ನೆಗಳಿಗೆ ಅರ್ನಬ್ ಯಾವುದೇ ಉತ್ತರ ನೀಡಿಲ್ಲ. ಲ್ಯಾಪ್ ಟಾಪ್ ನೋಡುತ್ತಾ ಕುಳಿತಿದ್ದ ಅವರು ತಲೆಯನ್ನು ಮೇಲೆತ್ತಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News