'ಕ್ರೈಸ್ತ ಧರ್ಮಕ್ಕೆ ಮತಾಂತರ' ಎಂದ ಬಲಪಂಥೀಯ ಟ್ರೋಲ್ ಗಳಿಗೆ ವಿಜಯ್ ಸೇತುಪತಿ ತಿರುಗೇಟು

Update: 2020-02-14 17:30 GMT

ಚೆನ್ನೈ: ತಾನು ಸೇರಿದಂತೆ ಇತರ ತಮಿಳು ನಟರು 'ಕ್ರೈಸ್ತ ಮತಾಂತರ ಗುಂಪಿನ ಸದಸ್ಯರು ಎನ್ನುವ ಬಲಪಂಥೀಯ ಟ್ರೋಲ್ ಗಳಿಗೆ ತಿರುಗೇಟು ನೀಡಿದ 'ಮಕ್ಕಳ್ ಸೆಲ್ವನ್' ಖ್ಯಾತಿಯ ನಟ ವಿಜಯ್ ಸೇತುಪತಿ 'ಹೋಗಿ ಬೇರೆ ಕೆಲಸ ನೋಡಿ' ಎಂದಿದ್ದಾರೆ.

ತೆರಿಗೆ ಇಲಾಖೆಯು ನಟ ವಿಜಯ್ ಮನೆ ಮೇಲೆ ದಾಳಿ ನಡೆಸಿದ ನಂತರ ಬಲಪಂಥೀಯ ಟ್ರೋಲ್ ಗಳು ಈ ಪ್ರಕರಣಕ್ಕೆ ಕೋಮುಬಣ್ಣ ಬಳಿದಿತ್ತು. ವಿಶೇಷವಾಗಿ ಏನನ್ನೂ ವಿಜಯ್ ಮನೆಯಿಂದ ವಶಪಡಿಸಿಕೊಂಡಿಲ್ಲ ಎಂದು ಸ್ವತಃ ಆದಾಯ ತೆರಿಗೆ ಇಲಾಖೆ ಖಚಿತಪಡಿಸಿದ್ದರೂ ಬಲಪಂಥೀಯ ಟ್ರೋಲ್ ಗಳು ಸುಳ್ಳುಗಳನ್ನು ಹರಡಲು ಆರಂಭಿಸಿದವು. ತಮಿಳುನಾಡಿನಲ್ಲಿ 'ಕ್ರೈಸ್ತ ಮತಾಂತರ' ನೆಟ್ ವರ್ಕ್ ನ ಭಾಗವಾಗಿ ವಿಜಯ್, ವಿಜಯ್ ಸೇತುಪಥಿ ಸೇರಿ ಹಲವು ನಟರು, ಕೈಗಾರಿಕೋದ್ಯಮಿಗಳು ಇದ್ದಾರೆ. ಇವರೆಲ್ಲಾ ಈ ಕೆಲಸಕ್ಕೆ ಹಣ ಒದಗಿಸುತ್ತಿದ್ದಾರೆ ಎಂದು ಟ್ರೋಲ್ ಗಳು ಸುಳ್ಳು ಹರಡಿದ್ದವು.

ಈಗಾಗಲೇ ತಮಿಳು ನಟರಾದ ಆರ್ಯ, ರಮೇಶ್ ಖನ್ನಾ, ಆರತಿ ಮತ್ತು ವಿಜಯ್ ಸೇತುಪತಿಯವರನ್ನು ವಡಪಳನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಕೈಸ್ತ ಶಿಕ್ಷಣ ಸಂಸ್ಥೆಗಳ ಮೇಲೂ ಆರೋಪ ಹೊರಿಸಲಾಗಿತ್ತು. ಈ ಎಲ್ಲಾ ಸುಳ್ಳುಗಳನ್ನು ಗಮನಿಸಿದ ವಿಜಯ್ ಸೇತುಪತಿ ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದು, 'ಹೋಗಿ ಬೇರೆ ಕೆಲಸ ಇದ್ದರೆ ನೋಡಿ' (ಪೋಯಿ ವೇರೆ ವೇಲೆ ಇರುಂದ ಪಾರುಂಗಡಾ) ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News