ಪವರ್ ಸ್ಟಾರ್ ಪುನೀತ್‌ಗೆ ಚಿಣ್ಣರ ಸಿನೆಮಾದ ಕನಸು

Update: 2020-02-16 06:18 GMT

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಪಕರಾಗಿಯೂ ಹೆಸರು ಮಾಡುತ್ತಿದ್ದಾರೆ. ತಮ್ಮ ಪಿ.ಆರ್.ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅವರು ಕವಲುದಾರಿಯಂತಹ ಸದಭಿರುಚಿಯ ಸಿನೆಮಾ ನಿರ್ಮಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಹೊಸತನದ ಸಿನೆಮಾಗಳನ್ನು ನೀಡುವ ದೊಡ್ಡ ಕನಸನ್ನು ಅವರು ಹೊಂದಿದ್ದಾರೆ.

    ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಕವಲು ದಾರಿ ಸಿನೆಮಾದ ಬಳಿಕ ಪುನೀತ್ ಈಗ ಮಾಯಾಬಜಾರ್ 2016’ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಇದರ ಜೊತೆಗೆ ಪುನೀತ್ ಮಕ್ಕಳ ಚಿತ್ರವೊಂದನ್ನು ನಿರ್ಮಿಸುವ ಇಂಗಿತವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದ ಅಭೂತಪೂರ್ವ ಯಶಸ್ಸು, ಅಪ್ಪುಗೆ ಮಕ್ಕಳ ಸಿನೆಮಾವನ್ನು ನಿರ್ಮಿಸಲು ಸ್ಫೂರ್ತಿ ನೀಡಿದೆಯಂತೆ. ಅಂತಹ ಒಂದು ಗಟ್ಟಿಯಾದ ಹಾಗೂ ಸತ್ವಶಾಲಿಯಾದ ಕಥೆ ದೊರೆತಲ್ಲಿ ತಾನು ಕೂಡಾ ಮಕ್ಕಳ ಚಿತ್ರವನ್ನು ನಿರ್ಮಿಸುವುದಾಗಿ ಪುನೀತ್ ಹೇಳಿದ್ದಾರೆ.

ಸೂಪರ್‌ಸ್ಟಾರ್ ನಟನಾಗಿಯೂ, ಪ್ರಯೋಗಾತ್ಮಕ ಚಿತ್ರಗಳ ಮೂಲಕ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿರುವ ಅಪ್ಪುಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರು ಹ್ಯಾಟ್ಸ್‌ಅಪ್ ಹೇಳಲೇ ಬೇಕು ಅಲ್ಲವೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News