‘ದೇವಮಾನವ’,ಇತರ ಇಬ್ಬರ ವಿರುದ್ಧ 20 ಲ.ರೂ.ವಂಚನೆ ಪ್ರಕರಣ ದಾಖಲು

Update: 2020-02-16 14:38 GMT

ಥಾಣೆ,ಫೆ.16: ಐವರು ವ್ಯಕ್ತಿಗಳಿಗೆ 20 ಲ.ರೂ.ಗಳನ್ನು ವಂಚಿಸಿರುವ ಆರೋಪದಲ್ಲಿ ಇಲ್ಲಿಗೆ ಸಮೀಪದ ಮುಂಬ್ರಾದ ಸ್ವಘೋಷಿತ ದೇವಮಾನವ ಬಾಬಾ ಕಲೀಂ ಶಾ ವಾರ್ಷಿ ಮತ್ತು ಆತನ ಸಹಚರರಾದ ಯಾಕೀನ್ ಮತ್ತು ಫಝಲ್ ಎನ್ನುವವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ದೂರುದಾರ ಸೋಹೆಲ್ ಕುರೇಷಿ ಎನ್ನುವವರಿಗೆ ಅವರ ಕಷ್ಟಗಳನ್ನು ನಿವಾರಿಸಿ ಏಳಿಗೆಯನ್ನುಂಟು ಮಾಡುವುದಾಗಿ ನಂಬಿಸಿದ್ದ ಆರೋಪಿಗಳು ವಿವಿಧ ವಿಧಿಗಳಿಗಾಗಿ ಅವರಿಂದ ಹಣವನ್ನು ಪಡೆದುಕೊಂಡಿದ್ದರು. ಆರೋಪಿಗಳು ಪ್ರತ್ಯೇಕ ಸಂದರ್ಭಗಳಲ್ಲಿ ಇದೇ ತಂತ್ರವನ್ನು ಬಳಸಿ ಇನ್ನೂ ನಾಲ್ವರನ್ನು ವಂಚಿಸಿದ್ದಾರೆ. ಆರೋಪಿಗಳು ಈ ಐವರಿಂದ ಒಟ್ಟು 11 ಲ.ರೂ.ನಗದು ಹಣ ಮತ್ತು ಒಂಭತ್ತು ಲ.ರೂ.ವೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾರೆ ಎಂದು ಥಾಣೆ ಪೊಲೀಸ್ ವಕ್ತಾರರು ತಿಳಿಸಿದರು.

ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News