‘ಮೋದಿ, ಶಾ ಯಾವಾಗಲೂ ನೆರವಾಗುವುದಿಲ್ಲ’: ದಿಲ್ಲಿ ಚುನಾವಣಾ ಫಲಿತಾಂಶ ಕುರಿತು ಆರೆಸ್ಸೆಸ್

Update: 2020-02-20 17:06 GMT

ಹೊಸದಿಲ್ಲಿ, ಫೆ.20: ತನ್ನ ಮುಖವಾಣಿ ‘ಆರ್ಗ ನೈಸರ್’ನ ಸಂಪಾದಕೀಯ ಲೇಖನದಲ್ಲಿ ಇತ್ತೀಚಿನ ದಿಲ್ಲಿ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ವಿಶ್ಲೇಷಿಸಿರುವ ಆರೆಸ್ಸೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಬಿಜೆಪಿಗೆ ಸದಾ ನೆರವಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

2015ರ ಬಳಿಕ ತಳಮಟ್ಟದಲ್ಲಿ ಸಾಂಸ್ಥಿಕ ಸ್ವರೂಪವನ್ನು ಪುನಃಶ್ಚೇತನಗೊಳಿಸುವಲ್ಲಿ ಬಿಜೆಪಿಯ ವೈಫಲ್ಯ ಮತ್ತು ಚುನಾವಣೆಯ ಕೊನೆಯ ಹಂತದಲ್ಲಿ ಪ್ರಚಾರವನ್ನು ಬಿರುಸುಗೊಳಿಸಿದ್ದು ದಿಲ್ಲಿ ವಿಧಾನಸಭೆಯಲ್ಲಿ ಸೋಲಿಗೆ ಎರಡು ಮುಖ್ಯ ಕಾರಣಗಳಾಗಿವೆ ಎಂದಿರುವ ಅದು, ವಿಧಾನಸಭಾ ಮಟ್ಟದ ಚುನಾವಣೆಗಳಲ್ಲಿ ಮೋದಿ ಮತ್ತು ಶಾ ಯಾವಾಗಲೂ ನೆರವಿಗೆ ಬರಲು ಸಾಧ್ಯವಿಲ್ಲ. ಜನರ ಸ್ಥಳೀಯ ಆಕಾಂಕ್ಷೆಗಳನ್ನು ಈಡೇರಿಸಲು ದಿಲ್ಲಿಯಲ್ಲಿ ಪಕ್ಷದ ಪುನರ್‌ಸಂಘಟನೆ ಬಿಟ್ಟು ಬೇರೆ ಆಯ್ಕೆಯಿಲ್ಲ ಎನ್ನುವುದು ಸ್ಪಷ್ಟ ಸಂದೇಶವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News