ಕತ್ತೆ ಕಳವುಗೈದ ಆರೋಪ; ಮೂವರು ದಲಿತ ಯುವಕರಿಗೆ ಹಲ್ಲೆ

Update: 2020-02-23 17:33 GMT

ಜೈಸಲ್ಮಾರ್, ಫೆ. 23: ಕತ್ತೆಗಳನ್ನು ಕಳವುಗೈದ ಆರೋಪದಲ್ಲಿ ಮೂವರು ದಲಿತರಿಗೆ ಹಲ್ಲೆಗೈದ ಘಟನೆ ರಾಜಸ್ಥಾನದ ಜೈಸಲ್ಮಾರ್ ಜಿಲ್ಲೆಯಲ್ಲಿ ನಡೆದಿದೆ. ಇದು ಇತ್ತೀಚೆಗೆ ರಾಜಸ್ಥಾನದಲ್ಲಿ ದಲಿತರ ಮೇಲೆ ಹಲ್ಲೆ ನಡೆಯುತ್ತಿರುವ ಮೂರನೇ ಘಟನೆ.

ಈ ಘಟನೆ ಬಗೆಗಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಐವರನ್ನು ಬಂಧಿಸಲಾಗಿದೆ ಹಾಗೂ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಜೈಸಲ್ಮಾರ್ ಜಿಲ್ಲೆಯ ಫತೇಹ್‌ಗಢ ತಾಲೂಕಿನ ರಾಮಾ ಗ್ರಾಮದಲ್ಲಿ ಫೆಬ್ರವರಿ 15ರಂದು ಈ ಘಟನೆ ನಡೆದಿದೆ. ಕತ್ತೆ ಕಳವುಗೈದ ಆರೋಪದಲ್ಲಿ 10ಕ್ಕೂ ಅಧಿಕ ಜನರಿದ್ದ ಗುಂಪು ಮೂವರು ದಲಿತ ಯುವಕರಿಗೆ ದೊಣ್ಣೆಯಿಂದ ಥಳಿಸಿದೆ. ಅನಂತರ ಅವರನ್ನು ಪೊಲೀಸರಿಗೆ ಹಸ್ತಾಂತರಿಸಿದೆ.

‘‘ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರನ್ನು ಬಂಧಿಸಲಾಗಿದೆ. ಮೂವರು ಅಪ್ರಾಪ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣ ದಾಖಲಿಸಲಾಗಿದೆ’’ ಎಂದು ಸಂಗಾರ್ಹ್‌ ಪೊಲೀಸ್ ಠಾಣೆಯ ಎಸ್‌ಎಚ್‌ಒ ಉಗಮ್ ರಾಜ್ ಸೋನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News